ಯಾದಗಿರಿ: ತಾಲೂಕಿನ ಬಾಚವಾರ ಗ್ರಾಮದಲ್ಲಿ ಶನಿವಾರ ಹೋಳಿ ಹುಣ್ಣಿಮೆ ನಿಮಿತ್ತ ಗೆಳೆಯರೊಂದಿಗೆ ಬಣ್ಣದಾಟ ಆಡಿ ಗ್ರಾಮದ ಹೊರವಲಯದ ಕೆರೆಯಲ್ಲಿ ಸ್ನಾನ ಮಾಡಲು ಹೋಗಿ ಈಜು ಬಾರದ ಇಬ್ಬರು ಯುವಕರು ಮೃತಪಟ್ಟ ಘಟನೆ ಜರುಗಿದೆ.
ಯುವಕರಾದ ಮಾರ್ತಂಡಪ್ಪ(19), ಸಾಬಣ್ಣ( 18) ಕೆರೆಯಲ್ಲಿ ಮೃತರು . 12ಕ್ಕೂ ಹೆಚ್ಚು ಜನರ ಗುಂಪಿನ ಯುವಕರು, ಎಂದಿನಂತೆ ಹುಣ್ಣಿಮೆ ನಿಮಿತ್ತ ಬಣ್ಣದಾಟ ಆಡಿ ಸ್ನಾನ ಮಾಡಲು ಗ್ರಾಮದ ಹೊರವಲಯದ ಕೆರೆಗೆ ಹೋಗಿದ್ದಾರೆ. ಮೃತ ಯುವಕ ಸಾಬಣ್ಣನ ದೇಹ ಪತ್ತೆಯಾಗಿದ್ದು, ಇನ್ನೊಂದು ದೇಹಕ್ಕಾಗಿ ಹುಡುಕಾಟ ತಡರಾತ್ರಿವರೆಗೆ ನಡೆದಿದೆ. ಈ ಕುರಿತು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ