ಹಾರೂಗೇರಿ: ಸ್ವಾತಂತ್ರೃಕ್ಕಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ ಕಿತ್ತೂರು ವೀರರಾಣಿ ಚನ್ನಮ್ಮಾಜಿಯ ದೇಶ ಸೇವೆ ಶ್ಲಾಘನೀಯ ಎಂದು ಪಟ್ಟಣದ ಶ್ರೀ ರಾಮ ಮನೋಹರ ಲೋಹಿಯಾ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಆಡಳಿತಾಧಿಕಾರಿ ಮಹಾದೇವಿ ಎನ್.ಚೌಗಲಾ ಹೇಳಿದರು. ಪಟ್ಟಣದ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮಾಜಿ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಚಾರ್ಯ ಟಿ.ಎಸ್. ವಂಟಗೂಡಿ ಮಾತನಾಡಿ, ಬ್ರಿಟಿಷರ ವಿರುದ್ಧ ಕತ್ತಿಯ ಶಕ್ತಿಯನ್ನು ಯುಕ್ತಿಯಿಂದ ಝಳಪಿಸಿದ ರಾಣಿ ಚನ್ನಮ್ಮ ಎಂದೆಂದಿಗೂ ಅಜರಾಮರ ಎಂದರು.
ಎನ್.ಎಸ್.ಚೌಗಲಾ, ಪ್ರಾಚಾರ್ಯ ವೈ.ಬಿ.ಪಾಟೀಲ, ಮುಖ್ಯೋಪಾಧ್ಯಾಯ ವಿ.ಡಿ.ಧರ್ಮಟ್ಟಿ, ರೇಖಾ ಕಲ್ಲೋಳಿಕರ, ಎಸ್.ಜಿ.ರಾಯಬಾಗಕರ, ಮಹಾದೇವ ಚೌಗಲಾ, ಉದಯಕುಮಾರ ಆಕಾಶ,ಪಿ.ಎಸ್.ಪಟ್ಟಣಶೆಟ್ಟಿ, ಮನೋಜಕುಮಾರ, ಪಿ.ಎಂ.ದಡ್ಡಿ ಇದ್ದರು. ರಾಹುಲ ಶಿಂಗೆ ಸ್ವಾಗತಿಸಿದರು. ಕಾಂತೇಶ ಕೊಚೇರಿ ನಿರೂಪಿಸಿದರು. ಶಾಂತಾ ಗಾಣಿಗೇರ ವಂದಿಸಿದರು.