ಧಾರವಾಡ: ವಲಸೆ ಕಾರ್ವಿುಕರನ್ನು ಅಕ್ರಮವಾಗಿ ಕರೆದೊಯ್ಯುತ್ತಿದ್ದ ಎರಡು ಟ್ರಕ್ಗಳನ್ನು ಜಪ್ತಿ ಮಾಡಿದ ಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.
ಎರಡು ಟ್ರಕ್ಗಳಲ್ಲಿ ಕಾಸರಗೋಡಿನಿಂದ 27 ಹಾಗೂ ಮಂಗಳೂರಿನಿಂದ 47 ಜನ ಸೇರಿ ಒಟ್ಟು 74 ಜನರು ರಾಜಸ್ಥಾನ ಕಡೆಗೆ ಹೊರಟಿದ್ದರು. ಧಾರವಾಡ-ಬೆಳಗಾವಿ ಗಡಿ ಭಾಗದ ಚೆಕ್ಪೋಸ್ಟ್ನಲ್ಲಿ ಟ್ರಕ್ಗಳನ್ನು ತಪಾಸಣೆ ನಡೆಸಿದ ಸಂದರ್ಭದಲ್ಲಿ ಕಾರ್ವಿುಕರು ಇರುವುದು ಪತ್ತೆಯಾಗಿ ಕೂಡಲೇ ಟ್ರಕ್ಗಳನ್ನು ಜಪ್ತಿ ಮಾಡಿ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
74 ಕಾರ್ವಿುಕರನ್ನು ರಕ್ಷಣೆ ಮಾಡಿ ನಗರದ ಪಟ್ಟಣಶೆಟ್ಟಿ ಕಲ್ಯಾಣ ಮಂಟಪದಲ್ಲಿ ಆಶ್ರಯ ನೀಡಲಾಗಿದೆ. ಕಾಸರಗೋಡಿನ 27 ಕಾರ್ವಿುಕರು ಬಸ್ ಪಾಸ್ಗಳನ್ನು ಪಡೆದಿದ್ದಾರೆ. ಆದರೆ, ಅವರಿಗೆ ಬಸ್ ವ್ಯವಸ್ಥೆ ಮಾಡಲು ಇನ್ನೂ ಒಂದು ವಾರ ಕಾಲ ಸಮಯ ಬೇಕಿರುವ ಹಿನ್ನೆಲೆಯಲ್ಲಿ ಟ್ರಕ್ ಹತ್ತಿ ಹೊರಟಿದ್ದರು. ಕೆಲ ದಿನಗಳಲ್ಲೇ ಈ ಕಾರ್ವಿುಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಅವರನ್ನು ರಾಜಸ್ಥಾನಕ್ಕೆ ಕಳುಹಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ತಿಳಿಸಿದ್ದಾರೆ.
ಎಸ್ಪಿ ಮನವಿ:
ಟ್ರಕ್ ಹಾಗೂ ಕಂಟೇನರ್ಗಳಲ್ಲಿ ಸರಕು ಸಾಗಿಸಲು ಮಾತ್ರ ಅವಕಾಶವಿದೆ. ಜನರನ್ನು ಸಾಗಿಸಲು ವಾಹನಗಳು ಸುರಕ್ಷಿತವಾಗಿಲ್ಲ. ಹೀಗಾಗಿ ಚಾಲಕರು ಜನರನ್ನು ಸಾಗಿಸುವುದು ಅಪರಾಧವಾಗಿದೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಚಾಲಕರ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಹೀಗಾಗಿ ಗೂಡ್ಸ್ ವಾಹನಗಳಲ್ಲಿ ಜನರನ್ನು ಕರೆದೊಯ್ಯಬೇಡಿ ಎಂದು ಎಸ್ಪಿ ವರ್ತಿಕಾ ಕಟಿಯಾರ್ ಮನವಿ ಮಾಡಿದ್ದಾರೆ.