ಸುಂಟಿಕೊಪ್ಪ: ನಾಕೂರುಶಿರಂಗಾಲ ಗ್ರಾಮದಲ್ಲಿ ಗ್ರಾಮೀಣಾಭಿವೃಧ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಕೊಡಗು ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ವತಿಯಿಂದ ಇತ್ತೀಚೆಗೆ ಕಾನ್ ಬೈಲ್ ಶಾಲಾ ಆವರಣದಲ್ಲಿ ಸ್ವಚ್ಯೋತ್ಸವ-ನಿತ್ಯೋತ್ಸವ ಹಾಗೂ ಶ್ರಮದಾನ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾನ್ಬೈಲ್ ಶಾಲಾ ಆವರಣದಲ್ಲಿ ಗಿಡಗಂಟಿ ಕಡಿಯುವ ಮೂಲಕ ಶ್ರಮದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಬಿ.ಜಿ.ರಮೇಶ್, ಸದಸ್ಯರಾದ ಎಂ.ಸಿ.ಜಗನಾಥ್, ಪಿಡಿಒ ಗೂಳಪ್ಪ ಕೂತಿನಾರ್, ಸಿಬ್ಬಂದಿ, ಗ್ರಾಮದ ಯುವಕರು ಭಾಗವಹಿಸಿದ್ದರು.