More

    ಕಾಂಗ್ರೆಸ್ ಮುಳುಗುತ್ತಿರುವ ಹಡಗು; ಬಿಎಸ್ ವೈ

    ಹಾವೇರಿ: ಹಣ ಬಲ ತೋಳ್ಬಲ ಅಧಿಕಾರದ ಬಲದಿಂದ ಅಧಿಕಾರಕ್ಕೆ ಬರುತ್ತೇವೆಂಬ ಕಾಂಗ್ರೆಸ್ ಅನ್ನು ಜನ ತಿರಸ್ಕಾರ ಮಾಡಿದ್ದಾರೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದರ ಮೇಲೆ ಯಾರೂ ನಿಲ್ಲಲ್ಲ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

    ಬ್ಯಾಡಗಿ ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಬ್ಯಾಡಗಿಯಲ್ಲಿ ಬಹಳಷ್ಟು ಬಾರಿ ಸಮಾವೇಶ ಮಾಡಿದ್ದೇವೆ. ಆದರೆ, ಈ ಬಾರಿ ೨೫ ಸಾವಿರ ಜನ ಸೇರಿರುವುದು ಬಿಜೆಪಿ ಮೇಲೆ ನೀವು ಇಟ್ಟ ಭರವಸೆ ಕಾರಣ ಎಂದರು.

    ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಅತ್ಯುತ್ತಮ ಕೆಲಸ‌ ಮಾಡುತ್ತಿದೆ.

    ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
    ಕೊಳ್ಳೆಗಾಲ ನಗರಸಭೆ ಚುನಾವಣೆಯಲ್ಲಿ ೭ ರಲ್ಲಿ ೬ ಬಿಜೆಪಿ ಗೆಲುವು ಸಾಧಿಸಿದೆ. ವಿಜಯಪುರ ಮಹಾನಗರ ಪಾಲಿಕೆ ಬಿಜೆಪಿ ಪಾಲಾಗಿದೆ.

    ರಾಹುಲ್ ಗಾಂಧೀ ಜೋಡೋ ಯಾತ್ರೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದು ಇದರಿಂದ ಸಾಬೀತಾಗಿದೆ.

    ಕಿಸಾನ್ ಸಮ್ಮಾನ್, ಮನೆ ಮನೆಗೆ ಶುದ್ಧ ಕುಡಿಯುವ ನೀರು, ಪ್ರತಿ ಹಳ್ಳಿಗೆ ನೀರು, ಒಬ್ಬರಿಗೆ ೧೦ ಕೆಜಿಯಂತೆ ಅಕ್ಕಿ. ನೇಕಾರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದೇವೆ. ೮೦ ಸಾವಿರ ಶಾಲಾ ಕೊಠಡಿ ನಿರ್ಮಾಣ ಕಾರ್ಯ ನಡೆದಿದೆ.

    ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತರಲಾಯಿತು. ೧ ಲಕ್ಷ ರೂ. ಬಾಂಡ್. ವಿನೂತನ ಯೋಜನೆ ನಾವು ಜಾರಿಗೆ ತಂದೆವು. ಸಿದ್ದರಾಮಯ್ಯ ಐದು ವರ್ಷ ಆಡಳಿತದಲ್ಲಿ ಒಂದೇ ಒಂದು ಅತ್ಯುತ್ತಮ ಯೋಜನೆ ಹೇಳಲಿ ನೋಡೋಣ. ಹಾಗಾಗಿ ಜನ ತೀರ್ಮಾನಿಸಿದ್ದಾರೆ. ೧೫೦ ಸೀಟು ಗೆಲ್ಲಿಸಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ.

    ಹೆಣ್ಣು ಮಕ್ಕಳು ಸ್ವತಂತ್ರವಾಗಿ ಜೀವನ ಮಾಡಬೇಕೆಂದು ಬಿಜೆಪಿ ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದೆ.
    ಹೆಣ್ಣು ಮಕ್ಕಳು ಎಷ್ಟು ಓದುತ್ತಾಳೋ ಓದಿಸಿ ಎಂದರು.

    ಇಲ್ಲಿನ ಜನಸ್ತೋಮ ನೋಡಿದ ಮೇಲೆ ಕಾಂಗ್ರೆಸ್ ಜಂಗಾಬಲ ಅಡಗಿ ಹೋಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts