ಹುಬ್ಬಳ್ಳಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆ. 27ರಂದು ವಾಣಿಜ್ಯ ನಗರಿಯಲ್ಲಿ ಆಯೋಜಿಸಿರುವ ‘ಫ್ರೀಡಂ ಮಾರ್ಚ್’ ಅಭಿಯಾನ ಸಂಬಂಧ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಟಿ-ಶರ್ಟ್ ಬಿಡುಗಡೆ ಮಾಡಲಾಯಿತು.
ಹು-ಧಾ ಮಹಾನಗರ ಸೇವಾದಳದ ಮುಖ್ಯ ಸಂಚಾಲಕ ದೊಡ್ಡರಾಮಪ್ಪ ದೊಡ್ಡಮನಿ ನೇತೃತ್ವದಲ್ಲಿ ವಿದ್ಯಾನಗರ ಮತ್ತು ಉಣಕಲ್ ಬ್ಲಾಕ್ ಮಟ್ಟದ ಎಐಸಿಸಿ ಕಾರ್ಯಕ್ರಮದ ಅನುಷ್ಠಾನ ಸಮಿತಿ ಸಭೆ ನಡೆಯಿತು .
ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಉಣಕಲ್ ಬ್ಲಾಕ್ ಅಧ್ಯಕ್ಷ ಶರೀಫ ಗರಗದ, ಪಾಲಿಕೆ ಸದಸ್ಯರಾದ ಸುವರ್ಣ ಕಲ್ಲಕುಂಟ್ಲ, ಪ್ರಕಾಶ ಕುರಟ್ಟಿ, ಆರೀಫ್ ಭದ್ರಾಪುರ, ಇಕ್ಬಾಲ್ ನವಲೂರು, ಸಂದಿಲ್ ಕುಮಾರ, ಮೋಹನ ಹಿರೇಮನಿ, ಪ್ರಕಾಶ ಕ್ಯಾರಕಟ್ಟಿ ಇತರರು ಉಪಸ್ಥಿತರಿದ್ದರು.