More

    ಕರೆಗೋರಿ ಪ್ಲಾಟ್​ಗೆ ಮೂಲಸೌಲಭ್ಯ ಕಲ್ಪಿಸಿ

    ಲಕ್ಷ್ಮೇಶ್ವರ: ಪಟ್ಟಣದ 2ನೇ ವಾರ್ಡ್​ನ ಕರೇಗೋರಿ ಪ್ಲಾಟ್​ನಲ್ಲಿ ಮೂಲಸೌಲಭ್ಯದ ಕೊರತೆಯಿದ್ದು, ಇಲ್ಲಿನ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಎಂದು ಸ್ಥಳೀಯ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.

    ಸ್ಥಳೀಯ ನಿವಾಸಿ ನಾಗಪ್ಪ ಮುಳಗುಂದ ಮಾತನಾಡಿ, ‘ಕಳೆದ 15 ವರ್ಷಗಳಿಂದ ಈ ಕರೇಗೋರಿ ಬಡಾವಣೆಯಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಪಟ್ಟಣದ ಹೊರವಲಯವಾಗಿದ್ದರಿಂದ ಯಾರೊಬ್ಬರೂ ಇತ್ತ ಗಮನ ಹರಿಸಿಲ್ಲ. ರಸ್ತೆ, ಚರಂಡಿ, ಬೀದಿದೀಪ, ಸಾರ್ವಜನಿಕ ಶೌಚಗೃಹ, ಅಂಗನವಾಡಿ ಸೇರಿದಂತೆ ಮೂಲಸೌಲಭ್ಯಗಳ ಕೊರತೆಯಿಂದ ನಾವೆಲ್ಲ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಇನ್ನಾದರೂ ಸಮಸ್ಯೆಗಳಿಗೆ ಸ್ಪಂದಿಸಬೇಕು ಇಲ್ಲದಿದ್ದರೆ ಬಡಾವಣೆಯ ಜನರು ಪುರಸಭೆ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಮತ್ತು ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸುವ ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು. ಸ್ಥಳೀಯರಾದ ರಾಜು ಬಿ.ಬಿ., ಎಂ.ಬಿ. ಕೋಣನವರ, ಈಶ್ವರಪ್ಪ ನುಚ್ಚಂಬಲಿ, ಎಂ.ಎನ್. ಸಂಶಿ, ಸೋಮಣ್ಣ ಅಳ್ಳಳ್ಳಿ, ಮಂಜು ಶಿರಬಡಗಿ, ನಿಂಗರಾಜ ಸಾಲಮನಿ ಇತರರಿದ್ದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts