More

    ಒಂದೇ ದಿನದಲ್ಲಿ 3 ಸಾವಿರ ಪಹಣಿ ತಿದ್ದುಪಡಿ

    ದಾವಣಗೆರೆ : ರೈತರು ತಮ್ಮ ಭೂಮಿಯ ದಾಖಲೆಗಳನ್ನು ಸರಿಪಡಿಸಲು ತಾಲೂಕು ಕಚೇರಿಗೆ ಹೋಗುವುದು ಸಾಮಾನ್ಯ. ಆದರೆ ಬುಧವಾರ, ಜಿಲ್ಲಾಡಳಿತವೇ ಅಭಿಯಾನ ಕೈಗೊಂಡು ಒಂದೇ ದಿನದಲ್ಲಿ 3 ಸಾವಿರಕ್ಕಿಂತ ಹೆಚ್ಚು ಪಹಣಿಗಳ ತಿದ್ದುಪಡಿಗೆ ಕ್ರಮ ಕೈಗೊಂಡಿತು.
     ಜಿಲ್ಲೆಯ ಆರೂ ತಾಲೂಕುಗಳಲ್ಲಿ ಒಟ್ಟು 4600 ಕ್ಕಿಂತ ಹೆಚ್ಚು ಪಹಣಿ ತಿದ್ದುಪಡಿ ಪ್ರಕರಣಗಳು ಬಾಕಿ ಇದ್ದವು. ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ತಾಲೂಕು ಕಚೇರಿಗಳಲ್ಲಿ ತಿದ್ದುಪಡಿ ಪ್ರಕ್ರಿಯೆ ಕೈಗೊಳ್ಳಲಾಯಿತು.
     ಹೆಸರು ತಪ್ಪಾಗಿರುವುದು, ವಿಸ್ತೀರ್ಣ ವ್ಯತ್ಯಾಸ, ಇಂಡೀಕರಣ ಆಗದೇ ಇರುವುದು, ಎರಡು ಬಾರಿ ಮ್ಯುಟೇಷನ್, ಕಾಲಂ 3 ಮತ್ತು 9 ರಲ್ಲಿ ತಪ್ಪಾಗಿ ನಮೂದು ಆಗಿರುವುದು ಸೇರಿ ವಿವಿಧ ಬಗೆಯ ದಾಖಲೆಗಳನ್ನು ಸರಿಪಡಿಸಲಾಯಿತು. ತಾಲೂಕು ಕಚೇರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಭೇಟಿ ನೀಡಿದ್ದರು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts