More

    ಎಸಿಬಿ ಬಲೆಗೆ ತಹಸೀಲ್ದಾರ್ ಕಚೇರಿ ಎಸ್​ಡಿಎ

    ಹಾವೇರಿ: ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ಎನ್​ಒಸಿ ನೀಡಲು 5 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಹಾವೇರಿ ತಹಸೀಲ್ದಾರ್ ಕಚೇರಿಯ ಎಸ್​ಡಿಎ ಗುರುವಾರ ಎಸಿಬಿ ಬಲೆಗೆ ಬಿದ್ದಿದ್ದಾನೆ.

    ತಹಸೀಲ್ದಾರ್ ಕಚೇರಿಯಲ್ಲಿ ಎಸ್​ಡಿಎ ಆಗಿದ್ದ ಟಿ. ಪರಶುರಾಮ ಎಂಬುವರೇ ಎಸಿಬಿ ಬಲೆಗೆ ಬಿದ್ದ ನೌಕರ. ತಾಲೂಕಿನ ಹಂದಿಗನೂರ ಗ್ರಾಮದ ರೈತ ಕಲವೀರಗೌಡ ಕರಬಸನಗೌಡ ಪಾಟೀಲ ಎಂಬುವರಿಂದ 3 ಸಾವಿರ ರೂ.ಗಳ ಲಂಚ ಸ್ವೀಕರಿಸುತ್ತಿದ್ದ ಸಮಯದಲ್ಲಿ ಎಸಿಬಿಯವರು ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

    ರೈತ ಕಲವೀರಗೌಡ ಅವರ ಸರ್ವೆ ನಂಬರ್ 28/1ಎ ಜಮೀನು 2.16 ಎಕರೆಯನ್ನು ಬೇರೆಯವರಿಗೆ ಮಾರಾಟ ಮಾಡಲು ತಹಸೀಲ್ದಾರ್ ಕಚೇರಿಯಿಂದ ಎನ್​ಒಸಿಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಕೊಡಲು ಪರಶುರಾಮ 5 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ. ಇದರಿಂದ ನೊಂದ ರೈತ ಎಸಿಬಿಯವರಿಗೆ ದೂರು ನೀಡಿದ್ದ. ಎಸಿಬಿ ಡಿವೈಎಸ್​ಪಿ ಸೋಮಲಿಂಗಪ್ಪ ಕುಂಬಾರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಪಿಐಗಳಾದ ಸುದರ್ಶನ, ಶ್ರೀಶೈಲ ಚೌಗಲೆ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts