More

    ಎರಡು ವೈನ್​ಶಾಪ್ ಮಾಲೀಕರ ವಿರುದ್ಧ ಪ್ರಕರಣ

    ಶಿಗ್ಗಾಂವಿ: ಲಾಕ್​ಡೌನ್ ನಿಷೇಧಾಜ್ಞೆ ಉಲ್ಲಂಘಿಸಿ ಮದ್ಯ ಮಾರಾಟ ಮಾಡಿದ ಆರೋಪದ ಮೇಲೆ ಪಟ್ಟಣದ ಎರಡು ವೈನ್​ಶಾಪ್​ಗಳ ವಿರುದ್ಧ ಪ್ರಕರಣ ದಾಖಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಇರುವ ರತ್ನಾ ವೈನ್​ಶಾಪ್ ಹಾಗೂ ಹಳೇ ಬಸ್ ನಿಲ್ದಾಣ ಬಳಿಯ ವಿನಾಯಕ ವೈನ್​ಶಾಪ್​ನ ಬಾಗಿಲು ತೆರದು ದಾಸ್ತಾನನ್ನು ಅಬಕಾರಿ ಅಧಿಕಾರಿಗಳು ಪರಿಶೀಲಿಸಿದ್ದರು. ಈ ವೇಳೆ ಒಂದೇ ದಿನದಲ್ಲಿ ಭಾರಿ ಪ್ರಮಾಣದ ಮದ್ಯ ಮಾರಾಟವಾಗಿರುವುದು ಕಂಡುಬಂದಿತ್ತು.

    ಮಾ. 22ರ ಜನತಾ ಕರ್ಪ್ಯೂ ನಂತರ ಕೇವಲ ಒಂದು ದಿನ ಮದ್ಯ ವ್ಯಾಪಾರ ನಡೆದಿದೆ. ಸನ್ನದುದಾರರು ಅನಧಿಕೃತವಾಗಿ ಮಾರಾಟ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ವಿನಾಯಕ ವೈನ್ ಶಾಪ್ ಸಿಎಲ್ 2 ಸನ್ನದುದಾರ ಎಸ್.ಜಿ. ಬಡಿಗೇರ ಹಾಗೂ ರತ್ನಾ ವೈನ್​ಶಾಪ್ ಸಿಎಲ್ 2 ಸನ್ನದುದಾರ ಶಿವಾನಂದ ಮಹಲಿಂಗಪ್ಪ ಬಿಜಾಪುರ ಹಾಗೂ ಭಾಗ್ಯಶ್ರೀ ಶಿವಾನಂದ ಬಿಜಾಪುರ ವಿರುದ್ಧ ಏ. 26ರಂದು ಪ್ರತ್ಯೇಕ ದೂರು ದಾಖಲಾಗಿದೆ ಎಂದು ಅಬಕಾರಿ ಇಲಾಖೆ ಸಿಪಿಐ ಆರ್.ಐ. ಹೂಗಾರ, ಅಬಕಾರಿ ಸಬ್ ಇನ್ಸ್​ಪೆಕ್ಟರ್ ಜಿ.ಬಿ. ಗುಡಿಮನಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts