ಚಿತ್ರದುರ್ಗ: ನಿಯಮಾನುಸಾರ ನೋಂದಣಿ ಮಾಡಿಸದೆ, ಸರ್ಕಾರದ ರಾಜಸ್ವಕ್ಕೆ ನಷ್ಟ ಉಂಟು ಮಾಡುತ್ತಿರುವ ಸಬ್ ರಿಜಿಸ್ಟ್ರಾರ್ ಕಚೇರಿಯ ಉಪನೋಂದಣಾಧಿಕಾರಿ, ಸಿಬ್ಬಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದು ವಕೀಲ ಪಿ.ಲೀಲಾಧರ ಠಾಕೂರ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈನರ್ ಹೆಸರಿನಲ್ಲಿರುವ ಆಸ್ತಿಯನ್ನು ನ್ಯಾಯಾಲಯದ ಅನುಮತಿ ಇಲ್ಲದೆ ನೋಂದಣಿ ಮಾಡಲಾಗಿದೆ. ಜಮೀನು, ನಿವೇಶನ ಕಡಿಮೆ ಬೆಲೆಗೆ ನಿಗದಿಗೊಳಿಸಿ ನೋಂದಾಯಿಸಲಾಗುತ್ತಿದೆ. ಮಧ್ಯವರ್ತಿಗಳ ಹಾವಳಿಯೂ ಹೆಚ್ಚಾಗಿದ್ದು, ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಿಎಂಗೂ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ನಗರಸಭೆ ಮಾಜಿ ಸದಸ್ಯ ಬಿ.ಎಲ್.ರವಿಶಂಕರ್ಬಾಬು, ಮಲ್ಲಿಕಾರ್ಜುನ್, ರವಿ ಆಲಘಟ್ಟ, ಚಿತ್ರಶೇಖರಪ್ಪ, ರೇವಣ್ಣ ಮದಕರಿ ಇದ್ದರು.