ಹೊನ್ನಾವರ: ತಾಲೂಕಿನ ಶ್ರೀ ಕ್ಷೇತ್ರ ಇಡಗುಂಜಿ ವಿನಾಯಕ ದೇವಸ್ಥಾನಕ್ಕೆ ಅಂಗಾರಕ ಸಂಕಷ್ಟಿ ಅಂಗವಾಗಿ ಮಂಗಳವಾರ ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.
ಬೆಳಗ್ಗೆಯಿಂದ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಜರುಗಿದವು. ಹಣ್ಣು- ಕಾಯಿ, ಪಂಚಕಜ್ಜಾಯ ಗಣಹೋಮ ಸತ್ಯನಾರಾಯಣ ವ್ರತ, ಸತ್ಯಗಣಪತಿ ವ್ರತ ಮುಂತಾದ ಸೇವೆ ಸಲ್ಲಿಸಿದರು. 200ಕ್ಕೂ ಹೆಚ್ಚು ಗಣಹೋಮ, ಸತ್ಯನಾರಾಯಣ, ಸತ್ಯಗಣಪತಿ ವ್ರತ. 30 ಸಾವಿರಕ್ಕ್ಕೂ ಹೆಚ್ಚು ತೆಂಗಿನಕಾಯಿ ಸಮರ್ಪಣೆ, 115 ಕ್ವಿಂಟಾಲ್ಗೂ ಅಧಿಕ ಪಂಚಖಾದ್ಯ ಪ್ರಸಾದ ಮಹಾಗಣಪತಿಗೆ ಸಮರ್ಪಣೆಯಾಗಿದೆ. ಜಗತ್ತಿಗೆ ಬಂದಿರುವ ಸಂಕಷ್ಟಗಳನ್ನು ನಿವಾರಿಸಿ ಶ್ರೇಯಸ್ಸನ್ನು ಅನುಗ್ರಹಿಸಲು ಪ್ರಾರ್ಥಿಸಿದ್ದೇವೆ ಎಂದು ದೇವಸ್ಥಾನದ ಅರ್ಚಕ ಮಂಜುನಾಥ ಭಟ್ಟ ತಿಳಿಸಿದ್ದಾರೆ.