More

    ಇಡಗುಂಜಿ ವಿನಾಯಕ ದರ್ಶನ ಪಡೆದ ಭಕ್ತರು

    ಹೊನ್ನಾವರ: ತಾಲೂಕಿನ ಶ್ರೀ ಕ್ಷೇತ್ರ ಇಡಗುಂಜಿ ವಿನಾಯಕ ದೇವಸ್ಥಾನಕ್ಕೆ ಅಂಗಾರಕ ಸಂಕಷ್ಟಿ ಅಂಗವಾಗಿ ಮಂಗಳವಾರ ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.

    ಬೆಳಗ್ಗೆಯಿಂದ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಜರುಗಿದವು. ಹಣ್ಣು- ಕಾಯಿ, ಪಂಚಕಜ್ಜಾಯ ಗಣಹೋಮ ಸತ್ಯನಾರಾಯಣ ವ್ರತ, ಸತ್ಯಗಣಪತಿ ವ್ರತ ಮುಂತಾದ ಸೇವೆ ಸಲ್ಲಿಸಿದರು. 200ಕ್ಕೂ ಹೆಚ್ಚು ಗಣಹೋಮ, ಸತ್ಯನಾರಾಯಣ, ಸತ್ಯಗಣಪತಿ ವ್ರತ. 30 ಸಾವಿರಕ್ಕ್ಕೂ ಹೆಚ್ಚು ತೆಂಗಿನಕಾಯಿ ಸಮರ್ಪಣೆ, 115 ಕ್ವಿಂಟಾಲ್​ಗೂ ಅಧಿಕ ಪಂಚಖಾದ್ಯ ಪ್ರಸಾದ ಮಹಾಗಣಪತಿಗೆ ಸಮರ್ಪಣೆಯಾಗಿದೆ. ಜಗತ್ತಿಗೆ ಬಂದಿರುವ ಸಂಕಷ್ಟಗಳನ್ನು ನಿವಾರಿಸಿ ಶ್ರೇಯಸ್ಸನ್ನು ಅನುಗ್ರಹಿಸಲು ಪ್ರಾರ್ಥಿಸಿದ್ದೇವೆ ಎಂದು ದೇವಸ್ಥಾನದ ಅರ್ಚಕ ಮಂಜುನಾಥ ಭಟ್ಟ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts