More

    ಇಂಡಿ ಪಟ್ಟಣದದಲ್ಲಿ ಬೃಹತ್ ಪಿಂಚಣಿ ಅದಾಲತ್

    ಇಂಡಿ: ಪ್ರತಿ ವ್ಯಕ್ತಿಯ ಅನುಕೂಲಕ್ಕಾಗಿ ಸರ್ಕಾರ ಯೋಜನೆಗಳನ್ನು ಮಾಡಿದೆ. ಅವುಗಳ ಸದ್ಬಳಕೆ ಆಗಬೇಕು ಎಂದು ದಿವಾಣಿ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ, ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ ಈಶ್ವರ ಎಸ್.ಎಂ. ಹೇಳಿದರು.

    ತಾಲೂಕು ಆಡಳಿತ ವತಿಯಿಂದ ಕಂದಾಯ ಇಲಾಖೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಪಿಂಚಣಿ ಅದಾಲತ್ ಉದ್ಘಾಟಿಸಿ ಅವರು ಮಾತನಾಡಿದರು.

    ಎಲ್ಲ ರಾಷ್ಟ್ರಗಳು ತಮ್ಮ ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ಯೋಜನೆಗಳನ್ನು ಮಾಡುತ್ತಿವೆ. ಹಿಂದೆ ರಾಜ ಮಹಾರಾಜರು ತಮ್ಮ ಪ್ರಜೆಗಳ ಸಂರಂಕ್ಷಣೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರು. ಅದೇ ಮಾದರಿಯಲ್ಲೇ ಈಗಿನ ಸರ್ಕಾರಗಳು ಸಹ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿವೆ ಎಂದರು.

    ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಿಂಚಣಿ ಎಂದರೆ ಜನರಿಗೆ ಭದ್ರತೆ ಒದಗಿಸುವುದು. ಅಂಗವಿಕಲರು, ವಿಧವೆಯರು, ಹಿರಿಯರು, ರೈತ ಮಹಿಳೆಯರಿಗೆ ಮಾಸಾಶನ ನೀಡಿ ಅವರಿಗೆ ಭದ್ರತೆ ಒದಗಿಸುತ್ತದೆ. ಅದೇ ರೀತಿ ಪಿಂಚಣಿಯಲ್ಲಿ ಯಾರಿಗಾದರೂ ತೊಂದರೆಯಾದರೆ ಅದನ್ನು ಅದಾಲತ್ ಮೂಲಕ ಬಗೆಹರಿಸಿಕೊಳ್ಳಲು ಕೂಡ ಅವಕಾಶವಿದೆ. ಸರ್ಕಾರವೇ ಜನತೆಯ ಬಳಿಗೆ ಹೋಗಿ ಅವರ ಸಂಕಷ್ಟಗಳನ್ನು ಆಲಿಸಿ, ಅವರಿಗೆ ಭದ್ರತೆ ಒದಗಿಸಿಕೊಡುವ ಕಾರ್ಯಕ್ರಮವೇ ಪಿಂಚಣಿ ಅದಾಲತ್ ಆಗಿದೆ ಎಂದರು.

    ತಹಸೀಲ್ದಾರ್ ಬಿ.ಎಸ್.ಕಡಕಬಾವಿ ಮಾತನಾಡಿ, ಪಿಂಚಣಿ ಅದಾಲತ್ ಕಾರ್ಯಕ್ರಮ ಪ್ರತಿ ತಿಂಗಳು ಕೊನೆಯ ಶನಿವಾರ ಆಯೋಜಿಸಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

    ಸ್ಥಳದಲ್ಲಿಯೇ 30 ಜನರಿಗೆ ಪಿಂಚಣಿ ಆದೇಶ ನೀಡಲಾಯಿತು. ತಾಲೂಕು ಪಂಚಾಯಿತಿ ಇಒ ಬಾಬುರಾವ ರಾಠೋಡ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲಗೂರ, ಗ್ರೇಡ್-2 ತಹಸೀಲ್ದಾರ್ ಧನಪಾಲಶೆಟ್ಟಿ ದೇವೂರ, ವಕೀಲರ ಸಂಘದ ಅಧ್ಯಕ್ಷ ಪಿ.ಬಿ.ಪಾಟೀಲ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಬಿರಾದಾರ, ವಕೀಲ ಡಿ.ಎಸ್.ಮಡಿವಾಳಕರ, ಸಹಾಯಕ ಸರ್ಕಾರಿ ಅಭಿಯೋಜಕ ಐ.ಕೆ.ಗಚ್ಚಿನಮಹಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts