ಹಳಿಯಾಳ: ಲಾಕ್ಡೌನ್ ಘೊಷಣೆಯಾದ ನಂತರ ಬೆಂಗಳೂರಿನಲ್ಲಿಯೇ ಉಳಿದಿದ್ದ ಶಾಸಕ ಆರ್.ವಿ. ದೇಶಪಾಂಡೆ ಶುಕ್ರವಾರ ಹಳಿಯಾಳಕ್ಕೆ ಆಗಮಿಸಿದರು.
ಮಧ್ಯಾಹ್ನ ಪಟ್ಟಣಕ್ಕೆ ಆಗಮಿಸಿದ ಶಾಸಕ ಆರ್.ವಿ.ದೇಶಪಾಂಡೆ ನೇರವಾಗಿ ತಾಲೂಕು ಆಸ್ಪತ್ರೆಗೆ ತೆರಳಿದರು. ಅಲ್ಲಿ ಪತ್ನಿ ಸಮೇತ ಥರ್ಮಲ್ ಚಿಕಿತ್ಸೆಗೊಳಗಾದ ದೇಶಪಾಂಡೆ ಚಿಕಿತ್ಸಾ ಫಾಮರ್್ನಲ್ಲಿರುವ ವಿವಿಧ ಪ್ರಶ್ನೆಗಳಿಗೆ ಮಾಹಿತಿಯನ್ನು ನೀಡಿದರು.
ಆರೋಗ್ಯ ಕಿಟ್ ವಿತರಣೆ: ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಕದಂ ಅವರೊಂದಿಗೆ ರ್ಚಚಿಸಿದ ದೇಶಪಾಂಡೆ ತಾಲೂಕು ಹಾಗೂ ಗ್ರಾಮಾಂತರ ಭಾಗದಲ್ಲಿನ ಆರೋಗ್ಯ ಘಟಕಗಳ ಔಷದ ಸ್ಟಾಕ್ಗಳ ಮಾಹಿತಿಯನ್ನು ಪಡೆದರು. ಇದೇ ವೇಳೆ ವಿಆರ್ಡಿ ಟ್ರಸ್ಟ್ ವತಿಯಿಂದ ಹಳಿಯಾಳ ಮತ್ತು ದಾಂಡೇಲಿ ತಾಲೂಕಿನ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಆರೋಗ್ಯ ಕಿಟ್ ವಿತರಣೆಗೆ ಚಾಲನೆ ನೀಡಿದರು. ಹಳಿಯಾಳ ತಾಲೂಕಿನಲ್ಲಿ 180 ಮತ್ತು ದಾಂಡೇಲಿ ತಾಲೂಕಿಗೆ 90 ಒಟ್ಟು 270 ಆರೋಗ್ಯ ಕಿಟ್ಗಳನ್ನು ವಿತರಿಸಲಾಗುತ್ತಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.