More

    ಆರ್ಥಿಕ ಶಿಸ್ತಿನಿಂದ ದೇಶದ ಅಭಿವೃದ್ಧಿ

    ಸಾಗರ: ಕರೊನಾ ಸಂದರ್ಭದಲ್ಲಿ ಜನರ ಜೀವನ ವಿಧಾನವೇ ಬದಲಾಗಿದೆ. ಆರ್ಥಿಕ ಶಿಸ್ತಿನಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಆಂತರಿಕ ಲೆಕ್ಕಪರಿಶೋಧಕ ಬಿ.ವಿ.ರವೀಂದ್ರನಾಥ್ ಹೇಳಿದರು.

    ನಗರದ ಅಂಭ್ರೀಣಿ ವಿದ್ಯೇಶ ಸೌಹಾರ್ದ ಸಂಸ್ಥೆ ಗುರುವಾರ 16ನೇ ವಾರ್ಷಿಕ ಸರ್ವಸದಸ್ಯರ ಸಮಾಲೋಚನಾ ಸಭೆಯಲ್ಲಿ ಪ್ರಸ್ತುತ ಸಂದರ್ಭದಲ್ಲಿ ಆರ್ಥಿಕ ಸಬಲೀಕರಣ ಸಾಧಿಸುವ ಕುರಿತು ಮಾತನಾಡಿ, ಜೀವನದಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಎದುರಿಸಲು ಮಾನಸಿಕ ಸಿದ್ಧತೆ ಅಗತ್ಯ ಎಂದರು.

    ಸಂಸ್ಥೆ ಅಧ್ಯಕ್ಷ ಯು.ಶಿವಾನಂದ ಭಂಡಾರ್ಕರ್ ಆರ್ಥಿಕ ಭದ್ರತೆ ಜತೆಗೆ ಆರೋಗ್ಯದತ್ತ ವಿಶೇಷ ಗಮನಹರಿಸಬೇಕಿದೆ. ಸಂಸ್ಥೆಗಳ ಉದ್ದೇಶ ಹಣ ಸಂಗ್ರಹಣೆ ಮಾತ್ರವಲ್ಲ. ಸಮಾಜಮುಖಿ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಕರೊನಾ ನಂತರ ಎಲ್ಲ ಸವಾಲುಗಳನ್ನು ಎದುರಿಸಿ ಲಾಭದಾಯಕವಾಗಿ ಬೆಳೆದುಬಂದಿರುವ ಹೆಗ್ಗಳಿಕೆ ನಮ್ಮ ಸಂಸ್ಥೆಗಿದೆ ಎಂದರು.

    ಸಂಸ್ಥೆ ಉಪಾಧ್ಯಕ್ಷ ಟಿ.ವಿ.ಪಾಂಡುರಂಗ, ಹೇಮಾ ಸಹದೇವ, ಜಿ.ಆರ್.ರಾಘವೇಂದ್ರ, ಉಮಾ ನಾಗರಾಜ್, ವಿ.ಟಿ.ಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts