More

    ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಿ

    ಕಿಕ್ಕೇರಿ: ಕಲುಷಿತ ಪರಿಸರದಿಂದ ಮುಕ್ತರಾಗಲು ಸಕಾರಾತ್ಮಕ ಚಿಂತನೆ, ಆರೋಗ್ಯಕರ ಜೀವನ ಶೈಲಿ, ದೇವತಾರಾಧನೆ ರೂಢಿಸಿಕೊಳ್ಳಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ್ ನೆಲ್ಲಿತ್ತಾಯ ತಿಳಿಸಿದರು.

    ಹೋಬಳಿಯ ಕೃಷ್ಣಾಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ನವಜೀವನ ಸಮಿತಿ ಸದಸ್ಯರಿಗಾಗಿ ಭಜನೆ, ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಆರೋಗ್ಯಕರ, ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಸಂಸ್ಥೆಯಿಂದ 1645 ಮದ್ಯವರ್ಜನ ಶಿಬಿರ ನಡೆಸಲಾಗಿದ್ದು, ಸುಮಾರು 12 ಲಕ್ಷ ಜನರು ಮದ್ಯವ್ಯಸನದಿಂದ ಮುಕ್ತರಾಗಿದ್ದಾರೆ. ಕಳೆದ ವರ್ಷ ಪಟ್ಟಣದಲ್ಲಿ ನಡೆಸಿದ ಶಿಬಿರದಲ್ಲಿ ಮದ್ಯಪಾನದಿಂದ ಮುಕ್ತರಾಗಿ ನವಜೀವನ ಸಾಗಿಸುತ್ತಿರುವ ಜನರ, ಕುಟುಂಬದ ಆರೋಗ್ಯ ಕ್ಷೇಮ ವಿಚಾರಿಸಿಕೊಳ್ಳಲು ಪ್ರತಿ ತಿಂಗಳು ಸಭೆ ನಡೆಸಲಾಗುವುದು ಎಂದರು.

    ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಮಾತನಾಡಿದರು. ತಾಲೂಕು ಯೋಜನಾಧಿಕಾರಿ ಎಂ. ವೀರೇಶಪ್ಪ, ಜಿಲ್ಲಾ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಭಾಸ್ಕರ್, ಶಿಬಿರಾಧಿಕಾರಿ ಕುಮಾರ್, ಸದಸ್ಯರಾದ ನಾರಾಯಣಗೌಡ, ಮೇಲ್ವಿಚಾರಕಿ ರೇಣುಕಾ, ಕಾಂತಿಕಾಮಣಿ, ಮಾದಲಾಂಬಿಕಾ, ಯಶೋದಾ, ಅಶ್ವಿನಿ, ವಿನಯ್, ಮಧುಸೂದನ್, ಚೇತನ್, ನವಜೀವನ ಸಮಿತಿ ಸೇವಾ ಪ್ರತಿನಿಧಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts