More

    ಆತಂಕ ಇನ್ನೂ ದೂರವಾಗಿಲ್ಲ

    ಶಿರಹಟ್ಟಿ: ಮಹಾಮಾರಿ ಕರೊನಾ ಜನರ ಬದುಕನ್ನು ತಲ್ಲಣಿಸುವಂತೆ ಮಾಡಿದೆ. ಜನರ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಕೈಗೊಂಡ ಕಾರ್ಯ ಸ್ತುತ್ಯಾರ್ಹವಾಗಿದೆ. ಆತಂಕ ಇನ್ನೂ ದೂರವಾಗಿಲ್ಲ. ನಾಡಿನ ಜನತೆ ಲಾಕ್​ಡೌನ್ ನಿಯಮ ಪಾಲಿಸಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಫಕೀರಸಿದ್ಧರಾಮ ಶ್ರೀಗಳು ಭಕ್ತರಿಗೆ ಸಲಹೆ ನೀಡಿದರು.

    ಶುಕ್ರವಾರ ಮಠದಲ್ಲಿ ಮಠದ ಸಂಪ್ರದಾಯದಂತೆ ಸಾಂಕೇತಿಕ ಪೂಜೆ ನೆರವೇರಿಸಿ ಮಾತನಾಡಿದ ಶ್ರೀಗಳು, ಈ ವರ್ಷ ಮಠದ ಜಾತ್ರೆ ರದ್ದಾಗಿದ್ದರಿಂದ ಭಕ್ತರ ಮನಸ್ಸಿಗೆ ನೋವಾಗಿದೆ. ಎಲ್ಲವೂ ದೈವಿಚ್ಛೆ. ಈ ವರ್ಷ ಚೆನ್ನಾಗಿ ಮಳೆ-ಬೆಳೆ ಚೆನ್ನಾಗಿ ಆಗಿ, ಭಕ್ತರ ಮನೆ-ಮನ ತುಂಬುವಂತಾಗಲಿ ಎಂದು ಹಾರೈಸಿದರು.

    ಮಠಕ್ಕೆ ಕಿರುರಥ ಕಾಣಿಕೆ

    ಈ ಬಾರಿ ಜಾತ್ರೋತ್ಸವ ರದ್ದಾದ ಸಂಗತಿ ತಿಳಿಯುತ್ತಿದ್ದಂತೆ ಮಠದ ಭಕ್ತರಾದ ಕುಂದಕೋಳ ತಾಲೂಕು ಮಳಲಿ ಗ್ರಾಮದ ಶಿಲ್ಪಿ ಮುರಲಿಧರ ಬಡಿಗೇರ ಕೇವಲ 15 ದಿನಗಳಲ್ಲಿ ಸಾಗವಾನಿ ಕಟ್ಟಿಗೆ ಬಳಸಿ ಸಿದ್ಧಪಡಿಸಿದ ರಥವನ್ನು ಶಿರಹಟ್ಟಿ ಮಠಕ್ಕೆ ಭಕ್ತಿ ಕಾಣಿಕೆಯಾಗಿ ನೀಡಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts