More

    ಅವರಾದಿ ರಸ್ತೆ ಸುಧಾರಣೆಗೆ ಆಗ್ರಹ

    ರಾಮದುರ್ಗ: ತಾಲೂಕಿನ ಅವರಾದಿ ಗ್ರಾಮದಿಂದ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸುಧಾರಣೆ, ಬ್ರಿಡ್ಜ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರು ಭಾನುವಾರ ಶಾಸಕ ಮಹಾದೇವಪ್ಪ ಯಾದವಾಡ ಅವರಿಗೆ ಮನವಿ ಸಲ್ಲಿಸಿದರು.

    ಜಮೀನಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟು ಹೋಗಿದ್ದು, ರಸ್ತೆ ಸುಧಾರಣೆಗೆ ಹಲವು ಬಾರಿ ಆಗ್ರಹಿಸಲಾಗಿದೆ. ಹದಗೆಟ್ಟ ರಸ್ತೆಯಲ್ಲಿ ಜನ-ಜಾನುವಾರು ಸಂಚಾರಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಮೂಲ ಸೌಕರ್ಯ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಅನುದಾನ ಒದಗಿಸಬೇಕು. ಅವರಾದಿ ಗ್ರಾಮದಿಂದ ಕುರುಗೋವಿನಕೊಪ್ಪವರೆಗೆ, ಅವರಾದಿಯಯಿಂದ ನರಗುಂದವರೆಗೆ ರಸ್ತೆ ಸುಧಾರಣೆ ಸೇರಿ ಅವರಾದಿಯಿಂದ ನರಗುಂದ ರಸ್ತೆಯ ಶಿವಾನಂದ ಸೋಮಪ್ಪ ಕಟ್ಟೆಕಾರ ಅವರ ಜಮೀನಿನ ನಡುವೆ ಸೇತುವೆ ನಿರ್ಮಾಣ ಮಾಡಿ, ಸಂಚಾರಕ್ಕೆ ಉಂಟಾಗುತ್ತಿರುವ ತೊಂದರೆ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ಅನುದಾನ ಲಭ್ಯತೆ ಆಧಾರದ ಮೇಲೆ ಅವರಾದಿ ಗ್ರಾಮಸ್ಥರ ರಸ್ತೆ ಅಭಿವೃದ್ಧಿ ಹಾಗೂ ಬ್ರಿಡ್ಜ್ ನಿರ್ಮಾಣ ಬೇಡಿಕೆ ಈಡೇರಿಸಲು ಸರ್ಕಾರವನ್ನು ಅನುದಾನಕ್ಕಾಗಿ ಒತ್ತಾಯಿಸುವುದಾಗಿ ಭರವಸೆ ನೀಡಿದರು.

    ಗ್ರಾಮಸ್ಥರಾದ ಬಸಲಿಂಗಪ್ಪ ಗಾಣಿಗೇರ, ಮಲ್ಲಪ್ಪ ಗಾಣಿಗೇರ, ಪೀರಪ್ಪ ಯಮಗಾರ, ಶಿವಾನಂದ ಕಟ್ಟೆಕಾರ, ಶರಣಪ್ಪ ಕಟ್ಟೆಕಾರ, ಬಸವರಾಜ ಪ್ಯಾಟಿ, ದೇವಪ್ಪ ಚಿಕ್ಕೊಪ್ಪ, ಮಾಗುಂಡಪ್ಪ ಬೇವಿನಮರದ, ಬಸಪ್ಪ ಗಾಣಿಗೇರ, ಮಾಳಪ್ಪ ವಾಗಮೋಡೆ, ಮಂಜುನಾಥ ಚಿತ್ತರಗಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts