More

    ಅಭಿವೃದ್ಧಿಗೆ ಮತ ನೀಡಿ

    ನಂಜನಗೂಡು: ಮತದಾರರ ನಿರೀಕ್ಷೆಯಂತೆ ಕಳೆದ ಐದು ವರ್ಷದಲ್ಲಿ ಅಭಿವೃದ್ಧಿ ಪರ್ವವನ್ನೇ ಹರಿಸಿರುವ ಶಾಸಕ ಬಿ.ಹರ್ಷವರ್ಧನ್ ಅವರ ಅಭಿವೃದ್ಧಿ ಕಾರ್ಯವನ್ನು ಮುಂದಿಟ್ಟುಕೊಂಡು ಮತ ನೀಡುವ ಮೂಲಕ ಪುನರಾಯ್ಕೆ ಮಾಡುವಂತೆ ಸಂಸದ ವಿ.ಶ್ರೀನಿವಾಸಪ್ರಸಾದ್ ಮನವಿ ಮಾಡಿದರು.
    ನಗರದ ಶಂಕರಪುರ, ಶ್ರೀರಾಂಪುರ ಬಡಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಹರ್ಷವರ್ಧನ್ ಪರವಾಗಿ ಭಾನುವಾರ ಮತಯಾಚನೆಯಲ್ಲಿ ಮಾತನಾಡಿದರು. ಇದು ನನ್ನ ಕೊನೆ ಚುನಾವಣಾ ಪ್ರಚಾರ. ಈ ಚುನಾವಣೆ ಬಳಿಕ ನಾನು ಚುನಾವಣಾ ರಾಜಕೀಯದಿಂದ ನಿವೃತ್ತನಾಗಲಿದ್ದೇನೆ. ಐವತ್ತು ವರ್ಷಗಳಿಂದ ನನ್ನನ್ನು ಬೆಂಬಲಿಸುತ್ತಾ ಬಂದಿದ್ದೀರಿ. ಕ್ಷೇತ್ರದ ಮತದಾರರ ನಿರೀಕ್ಷೆಯಂತೆ 800 ಕೋಟಿಗೂ ಅಧಿಕ ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಿರುವ ಹರ್ಷವರ್ಧನ್ ಅವರ ಅಭಿವೃದ್ಧಿ ನೋಡಿ ಮತ ಚಲಾಯಿಸಿ ಮತ್ತೊಮ್ಮೆ ಗೆಲ್ಲಲು ನೀವೆಲ್ಲರೂ ಕೈಜೋಡಿಸುವಂತೆ ಹೇಳಿದರು.
    ಐದು ವರ್ಷಗಳ ಹಿಂದೆ ನಿಮ್ಮ ಮತ ಕೇಳಲು ಬಂದಾಗ ಶಾಸಕ ಹರ್ಷವರ್ಧನ್ ಅವರು ನಿಮಗೆ ಕೊಟ್ಟ ಮಾತಿನಂತೆ ಕಾರ್ಯ ನಿರ್ವಹಿಸಿದ್ದಾರೆ. ಶಂಕರಪುರ, ಅನಂದಪುರ, ಶ್ರೀರಾಮಪುರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಮಾಡುವ ಕಾರ್ಯಗಳು ಸಹ ಇನ್ನೂ ಇವೆ. ಅವುಗಳನ್ನು ಪೂರೈಸಲು ಅವರನ್ನು ಮತ್ತೆ ಶಾಸಕರಾಗಿ ಆಯ್ಕೆ ಮಾಡಬೇಕು ಎಂದರು.
    ಶಾಸಕ ಹರ್ಷವರ್ಧನ್ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯ ಮತ್ತು ಅನುದಾನ ಬಳಕೆಯನ್ನು ಕ್ಷೇತ್ರಕ್ಕೆ ಬಂದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮೆಚ್ಚಿಕೊಂಡಿದ್ದಾರೆ ಎಂದು ಹೇಳಿದರು.
    ಬಿಜೆಪಿ ಅಭ್ಯರ್ಥಿ ಬಿ.ಹರ್ಷವರ್ಧನ್ ಮಾತನಾಡಿ, ಶಂಕರಪುರದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದ ಅಂಬೇಡ್ಕರ್ ಸಮುದಾಯ ಭವನ, 35 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಗರಡಿ ಮನೆ, ಶಾಲಾ ಕೊಠಡಿ, 15 ಲಕ್ಷ ರೂ. ವೆಚ್ಚದಲ್ಲಿ ರುದ್ರಭೂಮಿ ರಸ್ತೆ, ಉದ್ಯಾನವನ ಸೇರಿದಂತೆ ಎರಡು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದೇನೆ. ನನ್ನ ಅಭಿವೃದ್ಧಿ ಕಾರ್ಯ ನೋಡಿ ನನ್ನ ಗೆಲುವಿಗೆ ನಿಮ್ಮ ಮತ ನೀಡಿ ಎಂದು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕುಂಬರಹಳ್ಳಿ ಸುಬ್ಬಣ್ಣ, ಶಿರಮಳ್ಳಿ ಮಹದೇವಸ್ವಾಮಿ, ಬಾಲಚಂದ್ರ, ಧನರಾಜ್, ಬಿ.ಬಸವರಾಜು, ದೇವಪುತ್ರ, ಮಾಜಿ ನಗರಸಭಾ ಸದಸ್ಯರಾದ ವಿಜಯಾಂಬಿಕ, ಪುಟ್ಟರಾಜು, ನಿವೃತ್ತ ಶಿಕ್ಷಕರಾದ ಸರೋಜ, ಲಕ್ಷಮ್ಮ, ರಾಘವೇಂದ್ರ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts