ಬಾವನ ಸೌಂದತ್ತಿ: ಅಪರಿಚಿತ ವಾಹನ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬಾವನಸೌಂದತ್ತಿ ಕ್ರಾಸ್ ಬಳಿ ಸೋಮವಾರ ಸಂಭವಿಸಿದೆ.
ಮಾಂಜರಿ ಗ್ರಾಮದ ಮಹಾವೀರ ಭೋಜಕರ(35) ಮೃತ. ಕೆಲಸ ಮುಗಿಸಿ ಮಹಾವೀರ ನಸಲಾಪುರ ಗ್ರಾಮದಿಂದ ಮಾಂಜರಿ ಗ್ರಾಮಕ್ಕೆ ತೆರಳುವಾಗ ಅಪಘಾತ ಸಂಭವಿಸಿದ್ದು, ಡಿಕ್ಕಿ ಹೊಡೆದ ಅಪರಿಚಿತ ವಾಹನ ಪರಾರಿಯಾಗಿದೆ. ಸ್ಥಳಕ್ಕಾಗಮಿಸಿದ ರಾಯಬಾಗ ಠಾಣೆ ಪೊಲೀಸರು ಪರೀಶಿಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.