More

    ಅಪಘಾತದಲ್ಲಿ ತಂದೆ ಮಗಳು ಸಾವು

    ಯಲ್ಲಾಪುರ: ಸ್ಕೂಟಿಗೆ ಟ್ಯಾಂಕರ್ ಡಿಕ್ಕಿ ಹೊಡೆದು ಅಗ್ನಿಶಾಮಕ ದಳದ ಅಧಿಕಾರಿ ಹಾಗೂ ಆತನ ಮಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಅರಬೈಲ್ ಬಳಿ ಮಂಗಳವಾರ ಸಂಭವಿಸಿದೆ.

    ಯಲ್ಲಾಪುರ ಅಗ್ನಿಶಾಮಕ ದಳದಲ್ಲಿ ಅಧಿಕಾರಿಯಾಗಿದ್ದ ಅಂಕೋಲಾ ತಾಲೂಕಿನ ಹಾರವಾಡದ ವಿನೋದ ಕಿಂದರ್​ಕರ್(57) ಹಾಗೂ ಪುತ್ರಿ ಸುನೇಹಾ ವಿನೋದ ಕಿಂದರ್​ಕರ್ (13) ಮೃತರು. ಸೋಮವಾರ ರಾತ್ರಿ ಕರ್ತವ್ಯ ನಿರ್ವಹಿಸಿ, ಬೆಳಗ್ಗೆ ತನ್ನ ಊರಾದ ಹಾರವಾಡಕ್ಕೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ವಾರದಲ್ಲಿ 7 ಸಾವು: ತಾಲೂಕು ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟು ಹೊಂಡಗಳು ಉಂಟಾಗಿರುವುದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಕಳೆದ ಒಂದು ವಾರದೊಳಗೆ ಮೂರು ಅಪಘಾತಗಳಲ್ಲಿ ಒಟ್ಟು ಏಳು ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಎರಡು ಅಪಘಾತಗಳಿಗೆ ಟ್ಯಾಂಕರ್​ಗಳೇ ಕಾರಣವಾಗಿದ್ದು, ಹಾಳಾದ ರಸ್ತೆಯಲ್ಲಿ ಟ್ಯಾಂಕರ್​ಗಳ ಅತಿಯಾದ ವೇಗಕ್ಕೆ ಕಡಿವಾಣ ಹಾಕುವ ಕಾರ್ಯ ಆಗಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts