More

    ಅಕ್ಷರ ದಾಸೋಹ ಅಧಿಕಾರಿಗೆ ನೋಟಿಸ್

    ಬೆಳಗಾವಿ: ದಸರಾ ರಜೆ ಬಳಿಕ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ವಿತರಣೆ ಕುರಿತ ಜಿಲ್ಲಾಮಟ್ಟದ ಸಭೆಗೆ ಗೈರಾಗಿ, ಕರ್ತವ್ಯ ನಿರ್ಲಕ್ಷೃ ವಹಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಗೋಕಾಕ ತಾಲೂಕು ಅಕ್ಷರ ದಾಸೋಹ ಅಧಿಕಾರಿಗೆ ಮಧ್ಯಾಹ್ನ ಉಪಾಹಾರ ಯೋಜನೆಯ ಜಿಲ್ಲಾ ನಿರ್ದೇಶಕರು ನೋಟಿಸ್ ನೀಡಿ ಬಿಸಿ ಮುಟ್ಟಿಸಿದ್ದಾರೆ.

    ಅ.11ರಂದು ಮಧ್ಯಾಹ್ನದ ಉಪಾಹಾರ ಯೋಜನೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆಗೆ ಗೋಕಾಕ ಅಕ್ಷರ ದಾಸೋಹ ಅಧಿಕಾರಿ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಮಧ್ಯಾಹ್ನದ ಉಪಾಹಾರ ಯೋಜನೆಯ ಚಿಕ್ಕೋಡಿ ಜಿಲ್ಲಾ ಉಪನಿರ್ದೇಶಕರು ಅ.17ರಂದು ಶೋಕಾಸ್ ನೋಟಿಸ್ ನೀಡಿದ್ದಾರೆ.ತಾಲೂಕು ಮಟ್ಟದ ಸಹಾಯಕ ನಿರ್ದೇಶಕರ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು, ಜಿಲ್ಲಾಮಟ್ಟದ ಮೇಲಧಿಕಾರಿ ಸ್ವತಃ ಕರೆ ಮಾಡಿ, ಸಭೆಗೆ ಆಹ್ವಾನಿಸಿದರೂ, ಹಾಜರಾಗದೆ ಕರ್ತವ್ಯ ನಿರ್ಲಕ್ಷೃ ತೋರಿದ್ದೀರಿ. ಈ ಬಗ್ಗೆ ಕೂಡಲೇ ಲಿಖಿತವಾಗಿ ಕಾರಣ ನೀಡಿ ವಿವರಿಸುವಂತೆ ಸೂಚಿಸಿದ್ದಾರೆ. ಮೂರು ದಿನದೊಳಗಾಗಿ ಲಿಖಿತ ಉತ್ತರ ನೀಡದಿದ್ದರೆ ನಿಯಮಾನುಸಾರ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts