More

    ಅಂಬೇಡ್ಕರ್ ಚಿತ್ರಕ್ಕೆ ಅವಮಾನ ಖಂಡನೀಯ

    ಕಲಬುರಗಿ: ರಾಯಚೂರಿನಲ್ಲಿ ಗಣರಾಜ್ಯೋತ್ಸವ ದಿನ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇಡದೆ ಅವಮಾನಿಸಿದ್ದನ್ನು ಖಂಡಿಸಿ ನಗರದಲ್ಲಿ ಶುಕ್ರವಾರ ದಲಿತಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಿತು.

    ಧ್ವಜಾರೋಹಣ ವೇಳೆ ನ್ಯಾಯಾಲಯ ಆವರಣದಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಗೌರವ ಸಲ್ಲಿಸದೆ ಅವಮಾನಿಸಲಾಗಿದೆ. ಇದರಿಂದ ಇಡೀ ದೇಶಕ್ಕೆ ಅವಮಾನ ಆದಂತಾಗಿದೆ. ಅಗೌರವ ತೋರಿದ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ಪ್ರಮುಖರಾದ ಡಾ.ವಿಠಲ್ ದೊಡ್ಡಮನಿ, ಅರ್ಜುನ ಭದ್ರೆ, ಮರೆಪ್ಪ ಹಳ್ಳಿ, ಪರಮೇಶ್ವರ ಖಾನಾಪುರ, ದಶರಥ ಕಲಗುರ್ತಿ, ಪ್ರಕಾಶ ಮೂಲಭಾರತಿ, ಎ.ಬಿ.ಹೊಸಮನಿ, ಹಣಮಂತ ಯಳಸಂಗಿ, ಸಂತೋಷ ಮೇಲ್ಮನಿ, ಅಶ್ವಿನಿ ಮದನಕರ್, ಲಕ್ಷ್ಮೀಕಾಂತ ಹುಬ್ಬಳ್ಳಿ, ಸುರೇಶ ಹಾದಿಮನಿ, ವಿಶಾಲ ನವರಂಗ, ಸಚಿನ ಶಿರವಾಳ, ಸುನೀಲ ಮಾನ್ಪಡೆ, ಸುರೇಶ ಮೆಂಗನ್, ದೇವಿಂದ್ರ ಸಿನೂರ, ಮಜರ್ ಹುಸೇನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts