ಬೀದರ್: ವಿಧಾನ ಪರಿಷತ್ನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣೆ ನಿರ್ವಹಣಾ ಸಮಿತಿ ರಚಿಸಿ ಪದಾಧಿಕಾರಿಗಳ ನೇಮಕ ಮಾಡಲಾಗಿದೆ.
ಸಮಿತಿ ಜಿಲ್ಲಾ ಉಸ್ತುವಾರಿಯಾಗಿ ಬಾಬು ವಾಲಿ, ಸಹ ಉಸ್ತವಾರಿಯಾಗಿ ಸುರೇಶ ಬಿರಾದಾರ್, ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ (ಬೀದರ್), ಶರಣು ಸಲಗರ (ಭಾಲ್ಕಿ), ಪ್ರಕಾಶ ಖಂಡ್ರೆ (ಬಸವಕಲ್ಯಾಣ), ಈಶ್ವರಸಿಂಗ್ ಠಾಕೂರ್ (ಹುಮನಾಬಾದ್), ಶಿವಾನಂದ ಮಂಠಾಳಕರ್ (ಬೀದರ್ ದಕ್ಷಿಣ), ಡಾ.ಸಿದ್ದಲಿಂಗಪ್ಪ ಪಾಟೀಲ್ (ಔರಾದ್) ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ತಿಳಿಸಿದ್ದಾರೆ.