More

    ಸಿದ್ದಲಿಂಗೇಶ್ವರ ಸ್ವಾಮಿ ಪವಡಾ ಪುರುಷರು

    ಭಾಲ್ಕಿ: ಸಿದ್ದಲಿಂಗೇಶ್ವರ ಸ್ವಾಮಿ ಪವಾಡ ಪುರುಷರಾಗಿದರು. ಅವರು ಅನೇಕ ಅದ್ಭತಗಳನ್ನು ಮಾಡಿದ್ದಾರೆ ಎಂದು ನೆರೆಯ ತೆಲಂಗಾಣದ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ, ದೇಗಲಮಡಿ ಮತ್ತುಬಸವಕಲ್ಯಾಣ  ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಹೇಳಿದರು
    ತಾಲ್ಲೂಕಿನ ಸಿದ್ದೇಶ್ವರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ 77ನೇ  ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ರಾತ್ರಿನಡೆದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಿದ್ದಲಿಂಗೇಶ್ವರು ಅನಾರೋಗ್ಯ ಮತ್ತು ದುಃಖವನ್ನು ಗುಣಪಡಿಸುವ ಶಕ್ತಿ ಹೊಂದಿದ್ದಾರೆ. ಸಿದ್ದೇಶ್ವರ ಗ್ರಾಮದ ಅದಿ ದೇವತೆ ಶ್ರೀ ಸಿದ್ದಲಿಂಗೇಶ್ವರರು ಭಕ್ತರು ಭಕ್ತಿಯಿಂದ ಬೇಡಿದರೆ ವರವು ನೀಡಿದ್ದಾರೆ ಎಂದು ಹೇಳಿದರು.    
    ನಿತ್ಯ ಭಕ್ತಿಯಿಂದ ದೇವರ ಪೂಜೆ ಮಾಡಬೇಕು. ಆಧಾತ್ಮದ ಒಲವು ಬೆಳೆಸಿಕೊಳ್ಳಬೇಕು. ಮೂಢನಂಬಿಕೆ, ಮೂಢ ಆಚರಣೆಗಳಿಂದ ದೂರ ಇರಬೇಕು ಎಂದು ತಿಳಿಸಿದರು.
    ಹಿರಿಯರನ್ನು ಗೌರವಿಸಬೇಕು. ಜನ್ಮಕೊಟ್ಟ ತಂದೆ-ತಾಯಿಯ ಸೇವೆ ಮಾಡಬೇಕು. ಯಾರೊಂದಿಗೂ ವೈಷಮ್ಯ ಬೆಳೆಸಿಕೊಳ್ಳಬಾರದು. ಪರಸ್ಪರ ಪ್ರೀತಿಯಿಂದ ಕುಟುಂಬದಲ್ಲಿ  ಬಾಳಬೇಕು ಎಂದು ಸಲಹೆ ಮಾಡಿದರು.
    ಇಂದಿನ ಯುವಕರು ಮಾದಕ ವಸ್ತುಗಳ ಚಟಕ್ಕೆ ಬಿದ್ದು ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಪಾಲಕರು ಮಕ್ಕಳನ್ನೂ ಪೊಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.  ಗ್ರಾಮದಲ್ಲಿ ಎಲ್ಲಾ ಜನಾಂಗದವರು ಸೌರ್ಹಾದತೆಯಿಂದ ಬದುಕಬೇಕು, ಯಾರೊಂದಿಗೆ ದ್ವೇಶ ಕಟ್ಟಿಕೊಳ್ಳಬಾರದು ಎಂದು ಹೇಳಿದರು
    ತಾವೇಲ್ಲರೂ  ಶ್ರೀ ಸಿದ್ದಲಿಂಗೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕು ಎಂದರು.
    ಮೊದಲಿಗೆ  ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಗೆ  ಬಸವಲಿಂಗ ಅವಧೂತರು ಪೂಜೆ ಸಲ್ಲಿಸಿದರು. ಶಶಿಧರ ಸೀತಾ, ಮಹಾದೇವಿ ಸೀತಾ ದಂಪತಿಗಳು ಅವಧೂತರ ಪಾದ ಪೂಜೆ ನೇರವೆರಿಸದಿದರು.
    ಮುಖಂಡರಾದ ರಾಜಕುಮಾರ ಬೆಲ್ಲಾಳೆ, ಸಂತೋಷ ತರನಳ್ಳೆ, ರಾಜಕುಮಾರ ಕನ್ನಕಟೆ ಸುಧಾಕರ ಪರ್ಮಾ, ವಿಶ್ವನಾಥ ಪರ್ಮಾ, ವೀರಶೇಟ್ಟಿ ಖಂಡ್ರೆ, ನಾಗಯ್ಯ ಸ್ವಾಮಿ, ಸಚೀನ್ ತರನಳೆ, ಶಾಮರಾವ ಪರ್ಮಾ, ಮಲ್ಲಪ್ಪ ಹುಚ್ಚೆ, ಅನೀಲ ಪರ್ಮಾ ಮೊದಲಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts