More

    ಬಿಜೆಪಿ, ಜೆಡಿಎಸ್ ಮುಖಂಡರು ಕಾಂಗ್ರೆಸ್‍ಗೆ

    ಬೀದರ್: ಬಿಜೆಪಿ, ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ನಗರದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಎಸ್.ಆರ್.ಎಸ್. ಫಂಕ್ಷನ್ ಹಾಲ್‍ನಲ್ಲಿ ಅರಣ್ಯ, ಪರಿಸರ, ಜೈವಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಪಕ್ಷಕ್ಕೆ ಬರಮಾಡಿಕೊಂಡರು.
    ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಂಗೀತಾ ಪಾಟೀಲ, ಮಾಜಿ ಸದಸ್ಯ ಝರೆಪ್ಪ ಮಮದಾಪುರ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಶಂಕರೆಪ್ಪ ಪಾಟೀಲ ಅತಿವಾಳ, ಅಲಿಯಂಬರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಅಶೋಕ ಡೋಣೆ, ಮುಖಂಡರಾದ ಸಂಗಮೇಶ ಪಾಟೀಲ ಅಲಿಯಂಬರ್, ಸೋಮಶೇಖರ ಬಸಪ್ಪ, ರಾಜಪ್ಪ ಖ್ಯಾಮಾ, ನೇತಾಜಿ ಪಾಟೀಲ ವಿಳಾಸಪುರ, ಚಂದ್ರಕಾಂತ ಹಾಲಹಳ್ಳೆ ರಾಜನಾಳ, ಮಹಾದೇವ ಬಿರಾದಾರ, ಸಿದ್ದು ಲೌಟೆ, ಸಂತೋಷ ಪಡಸಾಲೆ, ಅಲಿಯಂಬರ್‍ನ ನಾರಾಯಣರಾವ್ ಹಾಲಕೋಡೆ, ರಮೇಶ ಮಾಲಿಪಾಟೀಲ, ಬಸವರಾಜ ಮಾಲಿಪಾಟೀಲ, ಜಗನ್ನಾಥ ಪಾಪಡೆ, ಉಮೇಶ ಕೋಳಿ, ಪ್ರಭು ವಗ್ಗೆ, ರಮೇಶ ಬಸ್ತೆ, ಹುಲೆಪ್ಪ ಮೈಲೂರೆ, ಸಾಂಗ್ವಿಯ ಪಂಡಿತ, ಕಾಮಶೆಟ್ಟಿ ಉಪ್ಪೆ, ವಿಠ್ಠಲ ಸಂತಪುರೆ, ಉದಯಕುಮಾರ ಸಿದ್ದಾಪುರ, ಶಿವರಾಜ ಕಪಲಾಪುರ(ಎ), ಶರಣಪ್ಪ ಖೇಮಶೆಟ್ಟಿ, ಖ್ಯಾಡ್ ಗ್ರಾಮದ ಸಂಜೀವಕುಮಾರ ದಾನಾ, ಬಸವರಾಜ ದಾನಾ, ಧನರಾಜ ಹೊನ್ನಿಕೇರಿ ಮೊದಲಾದವರು ಕಾಂಗ್ರೆಸ್ ಸೇರಿದರು.
    ಪೌರಾಡಳಿತ ಸಚಿವ ರಹೀಂಖಾನ್, ಮಾಜಿ ಶಾಸಕ ಅಶೋಕ ಖೇಣಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಮುರಳಿಧರ ಎಕಲಾರಕರ್, ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ದತ್ತಾತ್ರಿ ಮೂಲಗೆ, ಎಂ.ಎ. ಸಮಿ, ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷ ಶಂಕರ ರೆಡ್ಡಿ ಚಿಟ್ಟಾ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪೂಜಾ ಜಾರ್ಜ್, ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಸಂಜುಕುಮಾರ ಡಿ.ಕೆ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts