More

    ಬಿಗ್​ಬಾಸ್​ನಿಂದ ಹೊರಬಂದ ಮೇಲೆ ಉಡುಪಿ ಹೋಟೆಲ್​ ಆರಂಭಿಸ್ತಾರಾ ಅರವಿಂದ್​-ದಿವ್ಯಾ?

    ಬೆಂಗಳೂರು: ಕನ್ನಡದ ಬಿಗ್​ಬಾಸ್​ ಸೀಸನ್​ 8 ಅನ್ನು ಕರೊನಾ ಕಾರಣದಿಂದಾಗಿ ಅರ್ಧಕ್ಕೇ ನಿಲ್ಲಿಸಲಾಗಿದೆ. 11 ಸ್ಪಧಿಗಳು ತುಂಬು ಮನಸ್ಸಿನಿಂದ ಬಿಗ್​ಬಾಸ್​ಗೆ ಬಾಯ್​ ಹೇಳಿದ್ದರೆ. ಬಿಗ್​ಬಾಸ್​ ಮನೆಯಿಂದ ಹೊರಬಂದ ಮೇಲೆ ಕರೊನಾ ವಾರಿಯರ್ಸ್​ ಆಗಿ ಸೇವೆ ಸಲ್ಲಿಸೋಣ ಎಂದೂ ಮಾತನಾಡಿಕೊಂಡಿದ್ದಾರೆ. ಆದರೆ ಈ ಮಧ್ಯೆ ಭಾರೀ ಸೌಂಡ್​ ಮಾಡ್ತಿರೋದು ಅರವಿಂದ್​ ಅವರ ಉಡುಪಿ ಹೋಟೆಲ್​ ವಿಚಾರ.


    ಹೌದು! ಅರವಿಂದ್​ ಅವರೊಂದಿಗೆ ಹೆಚ್ಚು ಕಾಣಿಸಿಕೊಂಡಿದ್ದ ದಿವ್ಯಾ ಉರುಡುಗ ಬಿಗ್​ಬಾಸ್​ ಸ್ಥಗಿತ ಆಗುವುದಕ್ಕಿಂತ ಕೆಲ ದಿನಗಳ ಮುಂಚೆಯೇ ಅನಾರೋಗ್ಯ ಕಾರಣಕ್ಕೆ ಮನೆಯಿಂದ ಹೊರಬಂದಿದ್ದರು. ದಿವ್ಯಾ ಅವರನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದ ಮನೆ ಮಂದಿ ಕಣ್ಮಣಿ ಬಳಿ ಒಂದು ಮನವಿ ಮಾಡಿದ್ದರು. ದಿವ್ಯಾ ಅವರ ವಾಯ್ಸ್​ ನೋಟ್​ ಆದರೂ ಕೇಳಿಸಿ ಎಂದಿದ್ದರು. ಅದರಂತೆ ದಿವ್ಯಾ ಅವರ ವಾಯ್ಸ್​ ನೋಟ್​ ಅನ್ನು ಮನೆಯಲ್ಲಿ ಪ್ಲೇ ಮಾಡಲಾಗಿತ್ತು.


    ವಾಯ್ಸ್​ ನೋಟ್​ನ ಕೊನೆಯಲ್ಲಿ ಅರವಿಂದ್​ ಬಗ್ಗೆ ಮಾತನಾಡುವ ದಿವ್ಯಾ, ನೀನು ಚೆನ್ನಾಗಿ ಆಡಬೇಕು, ಗೆಲ್ಲಬೇಕು ಎಂದಿದ್ದಾರೆ. ಅದಾದ ಮೇಲೆ ಉಡುಪಿ ಹೋಟೆಲ್​ ಬಗ್ಗೆ ಇನ್ನೊಂಚೂರು ಯೋಚಿಸಿ ಎಂದೂ ಹೇಳಿದ್ದಾರೆ. ಆದರೆ ಬಿಗ್​ಬಾಸ್​ ನೋಡಿದ ಜನರಿಗೆ ಈ ವಿಚಾರ ತಲೆಗೆ ಹೊಳೆದಿಲ್ಲ. ಈವರೆಗೂ ದಿವ್ಯಾ ಮತ್ತು ಅರವಿಂದ್​ ಉಡುಪಿ ಹೋಟೆಲ್​ ಬಗ್ಗೆ ಮಾತನಾಡಿದ್ದನ್ನೇ ನೋಡಿಲ್ಲ. ಈಗ ಇದೇನು ಹೋಟೆಲ್​ ವಿಚಾರ ಎಂದು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.


    ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಬೈಕ್​ ರೇಸರ್​ ಅರವಿಂದ್​ ಏನಾದರೂ ಉಡುಪಿ ಹೋಟೆಲ್​ ಸ್ಟಾರ್ಟ್​ ಮಾಡ್ತಾರಾ? ಅದಕ್ಕೆ ತೀರ್ಥಹಳ್ಳಿಯ ದಿವ್ಯಾ ಪಾರ್ಟ್ನರ್​ ಆಗಿರ್ತಾರಾ ಎನ್ನುವ ಚರ್ಚೆ ಹೆಚ್ಚಾಗಿದೆ. ಈ ಎಲ್ಲ ಪ್ರಶ್ನೆಗೆ ದಿವ್ಯಾ ಮತ್ತು ಅರವಿಂದ್​ ಅವರೇ ಉತ್ತರ ನೀಡಬೇಕಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts