ಬೆಂಗಳೂರು: ಕನ್ನಡದ ಬಿಗ್ಬಾಸ್ ಸೀಸನ್ 8 ಅನ್ನು ಕರೊನಾ ಕಾರಣದಿಂದಾಗಿ ಅರ್ಧಕ್ಕೇ ನಿಲ್ಲಿಸಲಾಗಿದೆ. 11 ಸ್ಪಧಿಗಳು ತುಂಬು ಮನಸ್ಸಿನಿಂದ ಬಿಗ್ಬಾಸ್ಗೆ ಬಾಯ್ ಹೇಳಿದ್ದರೆ. ಬಿಗ್ಬಾಸ್ ಮನೆಯಿಂದ ಹೊರಬಂದ ಮೇಲೆ ಕರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸೋಣ ಎಂದೂ ಮಾತನಾಡಿಕೊಂಡಿದ್ದಾರೆ. ಆದರೆ ಈ ಮಧ್ಯೆ ಭಾರೀ ಸೌಂಡ್ ಮಾಡ್ತಿರೋದು ಅರವಿಂದ್ ಅವರ ಉಡುಪಿ ಹೋಟೆಲ್ ವಿಚಾರ.
ಹೌದು! ಅರವಿಂದ್ ಅವರೊಂದಿಗೆ ಹೆಚ್ಚು ಕಾಣಿಸಿಕೊಂಡಿದ್ದ ದಿವ್ಯಾ ಉರುಡುಗ ಬಿಗ್ಬಾಸ್ ಸ್ಥಗಿತ ಆಗುವುದಕ್ಕಿಂತ ಕೆಲ ದಿನಗಳ ಮುಂಚೆಯೇ ಅನಾರೋಗ್ಯ ಕಾರಣಕ್ಕೆ ಮನೆಯಿಂದ ಹೊರಬಂದಿದ್ದರು. ದಿವ್ಯಾ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದ ಮನೆ ಮಂದಿ ಕಣ್ಮಣಿ ಬಳಿ ಒಂದು ಮನವಿ ಮಾಡಿದ್ದರು. ದಿವ್ಯಾ ಅವರ ವಾಯ್ಸ್ ನೋಟ್ ಆದರೂ ಕೇಳಿಸಿ ಎಂದಿದ್ದರು. ಅದರಂತೆ ದಿವ್ಯಾ ಅವರ ವಾಯ್ಸ್ ನೋಟ್ ಅನ್ನು ಮನೆಯಲ್ಲಿ ಪ್ಲೇ ಮಾಡಲಾಗಿತ್ತು.
ವಾಯ್ಸ್ ನೋಟ್ನ ಕೊನೆಯಲ್ಲಿ ಅರವಿಂದ್ ಬಗ್ಗೆ ಮಾತನಾಡುವ ದಿವ್ಯಾ, ನೀನು ಚೆನ್ನಾಗಿ ಆಡಬೇಕು, ಗೆಲ್ಲಬೇಕು ಎಂದಿದ್ದಾರೆ. ಅದಾದ ಮೇಲೆ ಉಡುಪಿ ಹೋಟೆಲ್ ಬಗ್ಗೆ ಇನ್ನೊಂಚೂರು ಯೋಚಿಸಿ ಎಂದೂ ಹೇಳಿದ್ದಾರೆ. ಆದರೆ ಬಿಗ್ಬಾಸ್ ನೋಡಿದ ಜನರಿಗೆ ಈ ವಿಚಾರ ತಲೆಗೆ ಹೊಳೆದಿಲ್ಲ. ಈವರೆಗೂ ದಿವ್ಯಾ ಮತ್ತು ಅರವಿಂದ್ ಉಡುಪಿ ಹೋಟೆಲ್ ಬಗ್ಗೆ ಮಾತನಾಡಿದ್ದನ್ನೇ ನೋಡಿಲ್ಲ. ಈಗ ಇದೇನು ಹೋಟೆಲ್ ವಿಚಾರ ಎಂದು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.
ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಬೈಕ್ ರೇಸರ್ ಅರವಿಂದ್ ಏನಾದರೂ ಉಡುಪಿ ಹೋಟೆಲ್ ಸ್ಟಾರ್ಟ್ ಮಾಡ್ತಾರಾ? ಅದಕ್ಕೆ ತೀರ್ಥಹಳ್ಳಿಯ ದಿವ್ಯಾ ಪಾರ್ಟ್ನರ್ ಆಗಿರ್ತಾರಾ ಎನ್ನುವ ಚರ್ಚೆ ಹೆಚ್ಚಾಗಿದೆ. ಈ ಎಲ್ಲ ಪ್ರಶ್ನೆಗೆ ದಿವ್ಯಾ ಮತ್ತು ಅರವಿಂದ್ ಅವರೇ ಉತ್ತರ ನೀಡಬೇಕಿದೆ. (ಏಜೆನ್ಸೀಸ್)