ಕೋಲ್ಕತ್ತಾ: ಲೈಂಗಿಕ ದೌರ್ಜನ್ಯದ ದೂರಿನ ಮೇಲೆ ತೃಣಮೂಲ ಕಾಂಗ್ರೆಸ್ ನಾಯಕರ ಮನೆ ಮೇಲೆ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳ ವಿರುದ್ಧ ಬಂಗಾಳ ಸರ್ಕಾರ ಪ್ರಕರಣ ದಾಖಲಿಸಿದೆ.
ಮೂವರ ಸಾವಿಗೆ ಕಾರಣವಾದ 2022ರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಸಿದ್ದರು. ನಂತರ ಬಾಲಚರಣ್ ಮೈತ್ರಿ ಮತ್ತು ಮನೋಬ್ರತಾ ಜಾನಾ ಅವರನ್ನು ಬಂಧಿಸಲಾಯಿತು. ಅವರ ಕುಟುಂಬ ಸದಸ್ಯರ ದೂರಿನ ಮೇರೆಗೆ ಎನ್ಐಎ ಅಧಿಕಾರಿಗಳ ವಿರುದ್ಧ ಲೈಂಗಿಕ ದೌರ್ಜನ್ಯ ಸೇರಿದಂತೆ ಇತರೆ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ‘ರಾಜೀವ್ ಚಂದ್ರಶೇಖರ್ ಆಸ್ತಿ ಮಾಹಿತಿ ಮುಚ್ಚಿಟ್ಟಿದ್ದಾರೆ’: ಚುನಾವಣಾ ಆಯೋಗಕ್ಕೆ ಎಲ್ಡಿಎಫ್ ದೂರು..
ಪೂರ್ವ ಮಿಡ್ನಾಪುರದಲ್ಲಿ ನೆಲೆಸಿದ್ದ ತೃಣಮೂಲ ನಾಯಕರ ಮನೆಗಳ ಮೇಲೆ ಎನ್ಐಎ ದಾಳಿ ನಡೆಸಿತ್ತು. ವಿವರವಾದ ತನಿಖೆಯ ನಂತರ ಇಬ್ಬರು ನಾಯಕರನ್ನು ಬಂಧಿಸಲಾಯಿತು. ಬಂಧಿತ ಆರೋಪಿಗಳೊಂದಿಗೆ ಕೋಲ್ಕತ್ತಾಗೆ ಹಿಂದಿರುಗುತ್ತಿದ್ದ ಎನ್ಐಎ ತಂಡದ ವಾಹನವನ್ನು ಗುಂಪು ತಡೆದು ಕಲು ತೂರಾಟ ನಡೆಸಿತು. ದಾಳಿಯಲ್ಲಿ ಓರ್ವ ಅಧಿಕಾರಿ ಗಾಯಗೊಂಡಿದ್ದರು. ಕೇಂದ್ರ ಪಡೆಗಳ ಆಗಮನದ ನಂತರ ಅಧಿಕಾರಿಗಳು ಹಿಂತಿರುಗಲು ಸಾಧ್ಯವಾಯಿತು.
ಪೊಲೀಸರಿಗೆ ಮಾಹಿತಿ ನೀಡದೆ ಎನ್ಐಎ ಅಧಿಕಾರಿಗಳು ದಾಳಿಗೆ ಹೋಗಿದ್ದು, ನಿಜವಾದ ಅಪರಾಧಿಗಳು ಎನ್ಐಎ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದರು. ಇದರ ಬೆನ್ನಲ್ಲೇ ಬಂಧಿತ ಆರೋಪಿ ಮನೋಬ್ರತಾ ಜಾನ ಪತ್ನಿ ಮೋನಿ ಜಾನಾ ಅಧಿಕಾರಿಗಳ ವಿರುದ್ಧ ಬಂಗಾಳ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಹಿಂದೆ, ಬಂಗಾಳದ ಸಂದೇಶಖಾಲಿಯಲ್ಲಿರುವ ತೃಣಮೂಲ ಕಾಂಗ್ರೆಸ್ ನಾಯಕ ಪಹಜಹಾನ್ ಶೇಖ್ ಅವರ ಮನೆ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಭಾರತದಲ್ಲಿ ಸುದ್ದಿ ಪ್ರಸಾರ: ಖಾಸಗಿ ಕಂಪನಿಗೆ ಪರವಾನಗಿ ಹಸ್ತಾಂತರಿದ ಬಿಬಿಸಿ