ಮುಂಬೈ: ಮಹಾರಾಷ್ಟ್ರ ಸಚಿವರಾದ ನವಾಬ್ ಮಲಿಕ್ ಮತ್ತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ) ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಹೊಸ ಆರೋಪಗಳನ್ನು ಮಾಡಿದ್ದಾರೆ. ಜನರನ್ನು ನಕಲಿ ಕೇಸುಗಳಲ್ಲಿ ಸಿಕ್ಕಿಹಾಕಿಸುವುದಕ್ಕಾಗಿ ಅವರ ಮನೆಗಳಲ್ಲಿ ಡ್ರಗ್ಸ್ ಪ್ಲಾಂಟ್ ಮಾಡಲು ಅವರದ್ದೇ ಆದ ಖಾಸಗಿ ಪಡೆಯನ್ನು ವಾಂಖೆಡೆ ಹೊಂದಿದ್ದಾರೆ ಎಂದಿದ್ದಾರೆ.
ಫ್ಲೆಚ್ಚರ್ ಪಟೇಲ್, ಕೆ.ಪಿ.ಗೋಸಾವಿ, ಆದಿಲ್ ಉಸ್ಮಾನಿ ಈ ‘ವಾಂಖೆಡೆ ಗ್ಯಾಂಗ್’ನ ಭಾಗವಾಗಿದ್ದಾರೆ ಎಂದಿರುವ ಮಲಿಕ್, ಶಾರುಖ್ ಪುತ್ರ ಆರ್ಯನ್ ಖಾನ್ ಆರೋಪಿಯಾಗಿರುವ ಕ್ರೂಸ್ ಶಿಪ್ ದಾಳಿಯಲ್ಲಿ ಯಾವುದೇ ಡ್ರಗ್ಸ್ ಸಿಕ್ಕಿರಲಿಲ್ಲ. ನಂತರದಲ್ಲಿ ವಾಂಖೆಡೆ ಕಚೇರಿಯಲ್ಲಿ ಡ್ರಗ್ಸ್ ಚಿತ್ರಗಳನ್ನು ತೆಗೆದು ಸೇರಿಸಲಾಗಿದೆ ಎಂದು ಆಪಾದಿಸಿದ್ದಾರೆ. ಕ್ರೂಸ್ ಶಿಪ್ಗೆ ರೆಸ್ಟೊರೆಂಟ್ ಒಂದರ ಕೇಟರಿಂಗ್ ಸರ್ವೀಸ್ ಮೂಲಕ ಡ್ರಗ್ಸ್ ಕಳುಹಿಸಲಾಗಿತ್ತು ಎಂದು ಆರೋಪಿಸಿರುವ ಮಲಿಕ್, ವಾಂಖೆಡೆ ವಿರುದ್ಧದ ತಮ್ಮ ಹೇಳಿಕೆಗಳನ್ನು ಸಮರ್ಥಿಸಲು ಶೀಘ್ರವೇ ಪುರಾವೆಗಳನ್ನು ಒದಗಿಸಿ, ಅವರನ್ನು ಎಕ್ಸ್ಪೋಸ್ ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಜಾತಿ ತನಿಖೆಗೆ ಸಿದ್ಧ ಎಂದ ಮಹಾ ಸರ್ಕಾರ
ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿ, ಡ್ರಗ್ ಪೆಡ್ಲರ್ಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವುದರಿಂದ ವಾಂಖೆಡೆಯನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದಿದೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ಸಿಪಿ)ಯ ನಾಯಕರೂ ಆದ ಮಲಿಕ್ರ ಅಳಿಯ ಸಮೀರ್ ಖಾನ್ರ ಮೇಲೂ ಮುಂಬೈ ಎನ್ಸಿಬಿ ಜನವರಿಯಲ್ಲಿ ಡ್ರಗ್ ಪೆಡ್ಲಿಂಗ್ ಕೇಸು ದಾಖಲಿಸಿತ್ತು ಎನ್ನಲಾಗಿದೆ. (ಏಜೆನ್ಸೀಸ್)
ಪವರ್ ಸ್ಟಾರ್ ಪುನೀತ್ ನಿಧನಕ್ಕೆ ಪುಟಾಣಿ ಅಭಿಮಾನಿ ಕಣ್ಣೀರು
ವರದಕ್ಷಿಣೆ ಕೇಸು ಹಾಕಿದ ಮಹಿಳೆಯನ್ನು ಹಾಡುಹಗಲೇ ಗುಂಡಿಕ್ಕಿ ಕೊಂದರು