ನವದೆಹಲಿ: ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ 2 ವರ್ಷಗಳ ಅವಧಿ ಏಕದಿನ ವಿಶ್ವಕಪ್ ಟೂರ್ನಿಯೊಂದಿಗೆ ಕೊನೆಗೊಂಡಿದೆ. ಅವರು ಇನ್ನು ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಣಿಸಿದ್ದು, ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಉತ್ತರಾಧಿಕಾರಿಯಾಗಿ ನೇಮಕಗೊಳ್ಳುವ ನಿರೀಕ್ಷೆ ಹೆಚ್ಚಾಗಿದೆ.
ರವಿಶಾಸ್ತ್ರಿ ಅವಧಿ ಮುಕ್ತಾಯಗೊಂಡ ಬಳಿಕ 2021ರ ನವೆಂಬರ್ನಲ್ಲಿ ದ್ರಾವಿಡ್ ಕೋಚ್ ಹುದ್ದೆ ಅಲಂಕರಿಸಿದ್ದರು. ತವರಿನ ದ್ವಿಪಯ ಸರಣಿಗಳಲ್ಲಿ ಟೀಮ್ ಇಂಡಿಯಾದ ಪ್ರಾಬಲ್ಯ ಮುಂದುವರಿಸುವಲ್ಲಿ ಅವರು ಯಶಸ್ವಿಯಾದರೂ, ಐಸಿಸಿ ಟೂರ್ನಿಗಳಲ್ಲಿ ಪ್ರಶಸ್ತಿ ಬರ ಮುಂದುವರಿದಿದೆ. 2022ರ ಟಿ20 ವಿಶ್ವಕಪ್, 2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಭಾರತ ನಿರಾಸೆ ಅನುಭವಿಸಿತ್ತು. ಆದರೆ ತವರಿನ ಏಕದಿನ ವಿಶ್ವಕಪ್ನಲ್ಲಿ ಪ್ರಶಸ್ತಿ ಗೆಲುವೊಂದನ್ನು ಬಿಟ್ಟು ಟೂರ್ನಿಯುದ್ದಕ್ಕೂ ಅಜೇಯ ಸಾಧನೆ ಮಾಡಿದ್ದರಿಂದ ದ್ರಾವಿಡ್ರನ್ನು ಮುಂದುವರಿಸಲು ಬಿಸಿಸಿಐ ಒಲವು ತೋರಿದ್ದರೂ, ಅವರು ಸಮ್ಮತಿಸಿಲ್ಲ ಎನ್ನಲಾಗಿದೆ. ಹೀಗಾಗಿ ಬೆಂಗಳೂರಿನ ಎನ್ಸಿಎಗೆ ದ್ರಾವಿಡ್ ಮರಳುವ ಸಾಧ್ಯತೆಗಳಿವೆ. ಜತೆಗೆ ಐಪಿಎಲ್ ತಂಡವೊಂದರ ಕೋಚ್ ಆಗಿಯೂ ಕಾರ್ಯನಿರ್ವಹಿಸಲು ದ್ರಾವಿಡ್ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.
ಈಗಾಗಲೆ ದ್ರಾವಿಡ್ ಗೈರಿನಲ್ಲಿ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತ ಬಂದಿರುವ ಲಕ್ಷ್ಮಣ್, ಪೂರ್ಣಪ್ರಮಾಣದಲ್ಲಿ ಹುದ್ದೆ ಅಲಂಕರಿಸುವ ಸಾಧ್ಯತೆ ಹೆಚ್ಚಿದೆ. ವಿಶ್ವಕಪ್ ಬೆನ್ನಲ್ಲೇ ನಡೆಯುತ್ತಿರುವ ಆಸೀಸ್ ವಿರುದ್ಧದ ಹಾಲಿ ಟಿ20 ಸರಣಿಯಲ್ಲೂ ಲಕ್ಷ್ಮಣ್ ಅವರೇ ಕೋಚ್ ಆಗಿದ್ದಾರೆ.
“ಲಕ್ಷ್ಮಣ್ ಕೋಚ್ ಆಗಲು ಆಸಕ್ತಿ ತೋರಿದ್ದು, ವಿಶ್ವಕಪ್ ವೇಳೆ ಅಹಮದಾಬಾದ್ಗೆ ತೆರಳಿ ಬಿಸಿಸಿಐ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಡಿಸೆಂಬರ್ 10ರಿಂದ ನಡೆಯಲಿರುವ ದಕ್ಷಿಣ ಆಫ್ರಿಕಾದಿಂದ ಲಕ್ಷ್ಮಣ್ ಪೂರ್ಣಪ್ರಮಾಣದ ಕೋಚ್ ಆಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಕೋಚ್ ಆಗಿ ದ್ರಾವಿಡ್ ನಿರ್ವಹಣೆ
ಯಶಸ್ಸು: ಐಸಿಸಿ ರ್ಯಾಂಕಿಂಗ್ನಲ್ಲಿ ಟೆಸ್ಟ್, ಏಕದಿನ, ಟಿ20ಯಲ್ಲಿ ಏಕಕಾಲದಲ್ಲಿ ನಂ. 1 ಪಟ್ಟಕ್ಕೇರಿದ ಸಾಧನೆ; ವರ್ಷಾರಂಭದಲ್ಲಿ ಆಸ್ಟ್ರೆಲಿಯಾ ಎದುರು ತವರಿನ ಟೆಸ್ಟ್ ಸರಣಿಯಲ್ಲಿ ಜಯ, ಬಾರ್ಡರ್-ಗಾವಸ್ಕರ್ ಟ್ರೋಫಿ ಉಳಿಸಿಕೊಂಡ ಸಾಧನೆ; ಯುವ ಆರಂಭಿಕ ಶುಭಮಾನ್ ಗಿಲ್ ರನ್ಪ್ರವಾಹ; ವಿರಾಟ್ ಕೊಹ್ಲಿ ಹಿಂದಿನ ಲಯಕ್ಕೆ ವಾಪಸ್; ಏಷ್ಯಾಕಪ್ ಗೆಲುವಿನ ಸಾಧನೆ; ಏಕದಿನ ವಿಶ್ವಕಪ್ಗೆ ರೂಪಿಸಿದ ಯೋಜನೆ ಯಶಸ್ಸು, ಸತತ 10 ಜಯದ ದಾಖಲೆ.
ವೈಫಲ್ಯ: ದಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ 1&0 ಮುನ್ನಡೆ ಸಾಧಿಸಿದ ಬಳಿಕ ಸರಣಿ ಸೋಲು; 2022ರ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಹೀನಾಯ ಸೋಲು; ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಆಸ್ಟ್ರೆಲಿಯಾ ಎದುರು ಸೋಲು; ಅಜೇಯ ಸಾಧನೆಯ ಬಳಿಕ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪರಾಭವ.
ಟಿ20ಗೆ ರೋಹಿತ್ ಶರ್ಮ ಗುಡ್ಬೈ? ಇನ್ನು ಏಕದಿನ-ಟೆಸ್ಟ್ ಕ್ರಿಕೆಟ್ನತ್ತ ಗಮನ!