More

    ಬೆಂಗಳೂರು ಮಿಷನ್​-2022 ಸಾಕಾರಕ್ಕೆ ವಿಜಯವಾಣಿ ಅಭಿಯಾನ: ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಸಿಎಂ ಬಿಎಸ್​ವೈ

    ಬೆಂಗಳೂರು: ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ, “ನವ ಬೆಂಗಳೂರು” ಹೆಸರಿನಲ್ಲಿ ಹೊರತಂದಿರುವ ವಿಶೇಷ ಸಂಚಿಕೆಯನ್ನು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಶುಕ್ರವಾರ ಬಿಡುಗಡೆ ಮಾಡಿದರು.

    ಬೆಂಗಳೂರು ಮಿಷನ್​-2022 ಸಾಕಾರಕ್ಕೆ ವಿಜಯವಾಣಿ ಅಭಿಯಾನ: ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಸಿಎಂ ಬಿಎಸ್​ವೈಬೆಂಗಳೂರು ಅಭಿವೃದ್ಧಿಗೆ ಸಿಎಂ ಬಿಎಸ್​ವೈ ನೇತೃತ್ವದ ರಾಜ್ಯ ಸರ್ಕಾರ “ಬೆಂಗಳೂರು ಮಿಷನ್​-2022” ಯೋಜೆನೆಯನ್ನು ಹಮ್ಮಿಕೊಂಡಿದ್ದು, ಯೋಜನೆಯ ಸಾಕಾರಕ್ಕೆ “ಭವಿಷ್ಯದ ಭವ್ಯನಗರ” ಹೆಸರಿನಲ್ಲಿ ವಿಜಯವಾಣಿ ಅಭಿಯಾನ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ವಿಜಯವಾಣಿ ಪತ್ರಿಕೆ ಇಂದು 24 ಪುಟಗಳ ಪುರವಣಿಯನ್ನು ಹೊರತಂದಿದ್ದು, ಇದರ ಸಂಚಿಕೆಯನ್ನು ಸಿಎಂ ಬಿಎಸ್​ವೈ ತಮ್ಮ ಅಧಿಕೃತ ಕಾವೇರಿ ನಿವಾಸದಲ್ಲಿ ಬಿಡುಗಡೆ ಮಾಡಿದರು.

    ಬಳಿಕ ಮಾತನಾಡಿದ ಬಿಎಸ್​ವೈ, ವಿಜಯವಾಣಿ ಪತ್ರಿಕೆಯವರು ಭವಿಷ್ಯದ ಭವ್ಯನಗರ ಅಂತ ವಿಶೇಷ ಸಂಚಿಕೆ ಹೊರ ತಂದಿದ್ದಾರೆ. ನಾಡಿನ ಜನರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ವಿಶೇಷ ಸಂಚಿಕೆಯನ್ನು ನಾನಿಂದು ಲೋಕಾರ್ಪಣೆ ಮಾಡಿದ್ದೇನೆ. ಬೆಂಗಳೂರು ಅಭಿವೃದ್ಧಿಗೆ ನನ್ನದೇ ಆದ ಕಲ್ಪನೆ ಇದೆ ಎಂದರು.

    ಬೆಂಗಳೂರು ಮಿಷನ್​-2022 ಸಾಕಾರಕ್ಕೆ ವಿಜಯವಾಣಿ ಅಭಿಯಾನ: ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಸಿಎಂ ಬಿಎಸ್​ವೈ

    ಈಗಾಗಲೇ ನಮ್ಮ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದೇವೆ. ಒಂದೂವರೆ ವರ್ಷದಲ್ಲಿ ಎಲ್ಲವೂ ಪೂರ್ಣಗೊಳುತ್ತವೆ. ಬೆಂಗಳೂರು ಚಿತ್ರಣ ಸಂಪೂರ್ಣ ಬದಲಾವಣೆ ಆಗಬೇಕು. ಬೆಂಗಳೂರು ಮೊದಲಿನಂತೆ ಹಸಿರುಮಯ ಆಗಬೇಕು. ಈ ಉದ್ದೇಶ ನಮ್ಮದೆಂದು ಹೇಳಿದರು.

    ಪ್ರಪಂಚ ಮತ್ತು ದೇಶದ ನಾನಾ ಭಾಗಗಳಿಂದ ಜನರು ಬೆಂಗಳೂರು ನಗರಕ್ಕೆ ಬರುತ್ತಾರೆ. ಆ ಹಿನ್ನೆಲೆಯಲ್ಲಿ ವಿಜಯವಾಣಿ ಅವರು ಈ ಲೇಖನ ಪ್ರಕಟಿಸಿರುವುದು ಇನ್ನೂ ಹೆಚ್ಚಿನ ಶಕ್ತಿಯನ್ನು ನಮಗೆ ಕೊಟ್ಟಂತೆ ಆಗಿದೆ. ಈ ಸಂದರ್ಭದಲ್ಲಿ ವಿಜಯವಾಣಿ ಸಂಸ್ಥೆಗೆ ಹೃತಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆಂದರು.

    ಬೆಂಗಳೂರು ಮಿಷನ್​-2022 ಸಾಕಾರಕ್ಕೆ ವಿಜಯವಾಣಿ ಅಭಿಯಾನ: ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಸಿಎಂ ಬಿಎಸ್​ವೈ

    ವಿಶೇಷ ಸಂಚಿಕೆ ಕಾರ್ಯಕ್ರಮದಲ್ಲಿ ವಿಜಯವಾಣಿ ಸಂಪಾದಕರಾದ ಕೆ.ಎನ್​.ಚನ್ನೇಗೌಡ, ಡೆಪ್ಯುಟಿ ಜನರಲ್ ಮ್ಯಾನೇಜರ್ ಲಿಂಗಯ್ಯ ಕಾಡದೇವರ ಮಠ, ಸಹಾಯಕ ಸಂಪಾದಕರಾದ ರುದ್ರಣ್ಣ ಹರ್ತಿಕೋಟೆ, ಹಿರಿಯ ವಿಶೇಷ ವರದಿಗಾರ ಶಿವನಾಂದ ತಗಡೂರು ಉಪಸ್ಥಿತರಿದ್ದರು.

    ಬೆಂಗಳೂರು ಮಿಷನ್​-2022 ಸಾಕಾರಕ್ಕೆ ವಿಜಯವಾಣಿ ಅಭಿಯಾನ: ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಸಿಎಂ ಬಿಎಸ್​ವೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts