More

    ಐವರು ಕೊಲೆ ಆರೋಪಿಗಳ ಸೆರೆ

    ವಿಜಯಪುರ: ನಗರ ಹೊರ ವಲಯದಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಏ.10 ರಂದು ದರ್ಗಾ ಬಡಾವಣೆ ನಿವಾಸಿ ದಸ್ತಗೀರಸಾಬ ಗುಲಾಬಸಾಬ ಮಮದಾಪೂರ ಈತನನ್ನು ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಣ್ಣಪ್ಪಗೌಡ ಉರ್ಫ್ ಅಣ್ಣಾರಾಯ ಸಿದ್ದಲಿಂಗಪ್ಪಗೌಡ (58), ಸಂತೋಷ ಗೋವಿಂದ ರಾಠೋಡ (27), ಶ್ಯಾಮರಾಯ ಉರ್ಫ್ ಶ್ಯಾಮು ರಾಮು ರಾಠೋಡ (25), ವಿಲಾಸ ಪಾಂಡು ರಾಠೋಡ, ಸಂತೋಷ ವೆಂಕು ಚವಾಣ್ ಇವರನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಅನುಪಮ ಅಗರವಾಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಹಳೆಯ ದ್ವೇಷದ ಹಿನ್ನೆಲೆ ಈ ಕೊಲೆ ಪ್ರಕರಣ ನಡೆದಿರುವುದು ತಿಳಿದು ಬಂದಿದೆ. ಆರೋಪಿಗಳು ಕೊಲೆ ಮಾಡಲು ಸುಪಾರಿ ಪಡೆದಿರುವುದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಚಾಕು, 2400 ರೂ. ನಗದು ಜಪ್ತು ಮಾಡಿಕೊಳ್ಳಲಾಗಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್‌ಪಿ ಅನುಪಮ ಅಗರವಾಲ್ ತಿಳಿಸಿದರು.

    ಎಎಸ್‌ಪಿ ಡಾ. ರಾಮ ಅರಸಿದ್ದಿ, ಅಧಿಕಾರಿಗಳಾದ ಅರುಣಕುಮಾರ ಕೋಳೂರ, ಸೋಮಶೇಖರ ಜುಟ್ಟಲ್, ರಾಜು ಮಮದಾಪುರ, ಸಿ.ಬಿ. ಚಿಕ್ಕೋಡಿ, ಎಸ್.ಡಿ. ಯಡಹಳ್ಳಿ ಮತ್ತಿತರರಿದ್ದರು.

    ದರೋಡೆಕೋರರ ಬಂಧನ
    ದ್ರಾಕ್ಷಿ ಹೇರಿಕೊಂಡು ಬರಲು ಹೋಗುತ್ತಿದ್ದ ಐಷರ್ ವಾಹನವನ್ನು ಉತ್ನಾಳ ಕ್ರಾಸ್ ಬಳಿ ತಡೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಲಕ್ಷಾಂತರ ರೂ. ದರೋಡೆ ಮಾಡಿದ ಆರು ಆರೋಪಿಗಳನ್ನು ಬಂಧಿಸಿರುವುದಾಗಿ ಎಸ್‌ಪಿ ಅನುಪಮ ಅಗರವಾಲ ತಿಳಿಸಿದರು.
    ಮಲ್ಲಿಕಾರ್ಜುನ ಊರ್ಫ್ ಮಲ್ಲು ಬಾಳಾಸಾಹೇಬ ಪಾಟೀಲ, ಪ್ರಶಾಂತ ಸಿದ್ರಾಮ ಕೆಂಪವಾಡ, ಸುನೀಲ ವಿಜಯಕುಮಾರ ವಳಸಂಗ, ಅರುಣ ರಮೇಶ ಜಾಧವ, ವಿಜಯಕುಮಾರ ಸಂಗಪ್ಪ ಮುತ್ತಗಿ, ರವಿ ರಾಯಪ್ಪ ಭೈರವಾಡಗಿ ಬಂಧಿತ ಆರೋಪಿಗಳು.

    ಇವರಿಂದ 1.20 ಲಕ್ಷ ರೂ. ನಗದು, ದರೋಡೆ ಕೃತ್ಯಕ್ಕೆ ಬಳಸಿದ ಎರಡು ಕಾರು, ಮೊಬೈಲ್ ಜಫ್ತಿ ಮಾಡಿಕೊಳ್ಳಲಾಗಿದೆ. ಕಳೆದ ಏ.7 ರಂದು ಬೆಂಗಳೂರಿನಿಂದ ಜತ್ತ ತಾಲೂಕಿನ ಕಡೆ ದ್ರಾಕ್ಷಿ ಹೇರಿಕೊಂಡು ಬರಲು ಹೋಗುತ್ತಿದ್ದ ಕ್ಯಾಂಟರ್ ವಾಹನವನ್ನು ಉತ್ನಾಳ ಕ್ರಾಸ್ ಬಳಿ ದರೋಡೆಕೋರರು ತಡೆದಿದ್ದರು. ಅಲ್ಲಿ ಮಾರಕ ಅಸ್ತ್ರಗಳನ್ನು ಪ್ರಯೋಗಿಸಿ ಬೆದರಿಕೆ ಹಾಕಿ 3.50 ಲಕ್ಷ ರೂ. ದೋಚಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts