More

    ಸಿದ್ಧಾರ್ಥ ನಗರದಲ್ಲಿ ಸಾಂಸ್ಕೃತಿಕ ಉತ್ಸವ

    ವಿಜಯಪುರ: ನಗರದ ಟಕ್ಕೆ ರಸ್ತೆಯಲ್ಲಿರುವ ಸಿದ್ಧಾರ್ಥ ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗಾನಗಂಧರ್ವ ಕಲಾ ಯುವ ಸಂಸ್ಥೆ (ರಿ) ಸಂಯುಕ್ತ ಆಶ್ರಯದಲ್ಲಿ ಸೋಮವಾರ 7ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಉತ್ಸವ ಜರುಗಿತು.

    ಉತ್ತರ ಕರ್ನಾಟಕ ರೈತ ಸಂಘದ ಉಪಾಧ್ಯಕ್ಷ ರಾಹುಲ ಕುಬಕಡ್ಡಿ ಉದ್ಘಾಟಿಸಿದರು. ಹಿಂದುಳಿದ ಸಣ್ಣ ಮತ್ತು ಅತಿ ಸಣ್ಣ ಒಕ್ಕೂಟದ ಜಿಲ್ಲಾಧ್ಯಕ್ಷೆ ಭಾರತಿ ಟಂಕಸಾಲಿ ಜ್ಯೋತಿ ಬೆಳಗಿಸಿದರು. ಬುರಾಣಪುರ ಸಿದ್ಧಾರೂಢಮಠದ ಯೋಗೇಶ್ವರಿ ಮಾತಾಜಿ ಹಾಗೂ ಕೊಪ್ಪಳ ಗವಿಮಠದ ಸಿದ್ದಲಿಂಗ ದೇವರು ಸಾನ್ನಿಧ್ಯ ವಹಿಸಿದ್ದರು.

    ಅಸಂಘಟಿತ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಮುತ್ತು ಸಂಗಪ್ಪ ಶಾಬಾದಿ, ಸುವಿಧಾ ಸಾಮಾಜಿಕ ಸೇವಾ ಸಂಘದ ಜಿಲ್ಲಾಧ್ಯಕ್ಷ ಫಯಾಜ ಕಲಾದಗಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಸಂಯೋಜಕ ವಿನೋದ ಎಚ್. ವ್ಯಾಸ, ಶಕ್ತಿಕುಮಾರ ಉಕುಮನಾಳ, ಪ್ರಶಾಂತ ಚೌಧರಿ, ಅಲ್ತಾಫ ಎಚ್. ಇಟಗಿ, ಮಹಿಪತಿ ದೇಸಾಯಿ, ಯೋಗೇಶ್ವರಕುಮಾರ ನಡುವಿನಕೇರಿ, ಅಶೋಕ ಪರಂಗಿ ಮತ್ತಿತರರಿದ್ದರು.

    ಗಾನ ಗಂಧರ್ವ ಕಲಾ ಯುವ ಸಂಸ್ಥೆ ಅಧ್ಯಕ್ಷೆ ಮಂಜುಳಾ ಹಿಪ್ಪರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಾತ್ರೇಯ ಹಿಪ್ಪರಗಿ ಸ್ವಾಗತಿಸಿದರು. ಗೋಪಾಲ ಇಂಚಗೇರಿ ನಿರೂಪಿಸಿದರು. ಗೋಪಾಲ ಹೂಗಾರ ವಂದಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು. ಗಾನ ಗಂಧರ್ವ ಕಲಾ ಯುವ ಸಂಸ್ಥೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts