More

    ಒಂದೇ ಸೂರಿನಡಿ ಸರ್ಕಾರಿ ಸೌಲಭ್ಯ

    ವಿಜಯಪುರ: ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶನಿವಾರ ಭೂಮಿ ಪೂಜೆ ನೆರವೇರಿಸಿದರು. ಇಲ್ಲಿನ ಲದ್ದಿಕಟ್ಟಿ ಹನುಮಾನ ಗುಡಿ ಹತ್ತಿರ, ಹಣಮಶೆಟ್ಟಿ ಟೈಯರ್ಸ್‌ ಮುಂದೆ ಹಾಗೂ ವಾಜಪೇಯಿ ರಸ್ತೆಯ ಮುಳವಾಡ ಆಸ್ಪತ್ರೆಯ ದೇವಿ ಗುಡಿ ಮುಂದೆ (ಗುರುಕುಲ ರಸ್ತೆ)ಯಲ್ಲಿ ಲೋಕೊಪಯೋಗಿ ಇಲಾಖೆಯಿಂದ ಮಂಜೂರಾದ 110 ಲಕ್ಷ ರೂ.ಮೊತ್ತದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ನಂತರ ಬಿಎಲ್‌ಡಿಇ ರಸ್ತೆಯಿಂದ ಚಾಬುಕಸಾ ದರ್ಗಾ ಮೂಲಕ ಶಾಂತಿನಿಕೇತನ ಶಾಲೆವರೆಗೆ (ವಾಜಪೇಯಿ ರಸ್ತೆ ಕೂಡುವ ರಸ್ತೆ) ಮಹಾನಗರ ಪಾಲಿಕೆಯ 14ನೇ ಹಣಕಾಸು ನಿಧಿಯಲ್ಲಿ ಮಂಜೂರಾದ 140 ಲಕ್ಷ ರೂ.ಮೊತ್ತದ ರಸ್ತೆ ಅಭಿವೃದ್ಧಿ ಹಾಗೂ ವಾರ್ಡ್ ನಂ. 12 ರ ಆನಂದ ನಗರದಲ್ಲಿ 14ನೇ ಹಣಕಾಸು ನಿಧಿಯಲ್ಲಿ ಮಂಜೂರಾದ 30 ಲಕ್ಷ ರೂ. ಮೊತ್ತದ ಒಳಚರಂಡಿ, ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

    ಬಳಿಕ ಮಾತನಾಡಿ, ನಗರದಲ್ಲಿ ಪತ್ರಾಸ್, ಗುಡಿಸಲು ಇರುವಂತಹ ಯಾವ ಬಡವರು ಇರುವುದಿಲ್ಲ. ಅವರಿಗೆ ಮನೆಗಳನ್ನು ಮಂಜೂರು ಮಾಡಲಾಗುವುದು. ಕುಡಿಯುವ ನೀರಿನ ವ್ಯವಸ್ಥೆ, ಸಿಸಿ ರಸ್ತೆ, ಡ್ರೈನೇಜ್ ವ್ಯವಸ್ಥೆ ಕಲ್ಪಿಸಿ ಸುಂದರವಾದ ನಗರ ನಿರ್ಮಿಸಲಾಗುವುದು ಎಂದರು
    ನಗರದಲ್ಲಿ ವಿವಿಧಡೆ ಈಗಾಗಲೇ ನಾವು ಜನಸ್ಪಂದನ ಕಾರ್ಯಕ್ರಮ ಮಾಡಿದ್ದೇವೆ. ಜನಸ್ಪಂದನ ಕಾರ್ಯಕ್ರಮ ಮಾಡುವುದನ್ನು ಮುಂದುವರಿಸುತ್ತೇನೆ. ಸರ್ಕಾರದ ವಿವಿಧ ಯೋಜನೆಗಳು ಸಾರ್ವಜನಿಕರಿಗೆ ಒಂದೇ ಸೂರಿನಡಿ ಸಿಗುವಂತೆ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದರು.

    ಶಾಸಕ ಡಾ. ದೇವಾನಂದ ಚವ್ಹಾಣ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ವಿಕ್ರಮ್ ಗಾಯಕವಾಡ, ಲಕ್ಷ್ಮಣ ಜಾಧವ, ಚಂದ್ರು ಚೌಧರಿ, ಅಶೋಕ ಬೆಲ್ಲದ, ಬಸವರಾಜ ಗೊಳಸಂಗಿ, ಗುರು ಗಚ್ಚಿನಮಠ, ಸದಾಶಿವ ಗುಡ್ಡೋಡಗಿ, ಪರಶುರಾಮ ರಜಪೂತ, ರಾಜಶೇಖರ ಭಜಂತ್ರಿ, ಶರಣು ಕಾಖಂಡಕಿ, ಪ್ರಕಾಶ ಚವ್ಹಾಣ್, ರಮೇಶ ಪಡಸಲಗಿ, ನಾಗರಾಜ ಮುಳವಾಡ, ಪ್ರವೀಣ ಕುಂಬಾರ, ಸಂದೀಪ ಪಂಗಡವಾಲೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts