More

    ರೆಡ್‌ಕ್ರಾಸ್ ಸಂಸ್ಥೆ ಸೇವೆ ಅನನ್ಯ

    ವಿಜಯಪುರ: ದೇಶದಲ್ಲಿ ರೆಡ್‌ಕ್ರಾಸ್ ಸಂಸ್ಥೆ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ಜಿಲ್ಲೆಯಲ್ಲಿಯೂ ಸಂಸ್ಥೆಯ ಕಾರ್ಯಚಟುವಟಿಕೆ ಗಮನಿಸಿದ್ದೇನೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಹೇಳಿದರು.
    ಇಲ್ಲಿನ ಬಿಎಲ್‌ಡಿಇ ಸಂಸ್ಥೆಯ ಎಎಸ್‌ಪಿ ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ನಡೆದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ 2019-20ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದೆ ಬರಲಿರುವ ದಿನಗಳಲ್ಲಿ ರೆಡ್‌ಕ್ರಾಸ್ ಸಂಸ್ಥೆ ಸೇವೆಯನ್ನು ನಿರ್ದಿಷ್ಟ ಉದ್ದೇಶಗಳಿಗಾಗಿ ಬಳಸಿಕೊಳ್ಳುವುದಾಗಿ ತಿಳಿಸಿದರು.

    ಡಾ.ಎಲ್.ಎಚ್.ಬಿದರಿ, ಶರದ ರೊಡಗಿ, ಎಸ್.ಜಿ.ಮುರನಾಳ, ಡಾ.ಎಸ್.ಎಲ್. ಲಕ್ಕಣ್ಣವರ, ಡಾ. ಕವಿತಾ ದೊಡಮನಿ, ಸಿ.ಎಚ್.ಲೆಂಡಿ, ಮುರುಗೇಶ ವೈ.ಪಟ್ಟಣಶೆಟ್ಟಿ, ಸೋಮನಾಥ ಜೇವೂರ, ಈರಪ್ಪ ಇಕ್ಕಳಕಿ, ಪ್ರೊ.ಬಿ.ಎಂ.ಬಿರಾದಾರ ಅವರು ಇದೇ ವೇಳೆ 2020-21 ರಿಂದ 2022-23 ನೇ ಸಾಲಿನ ಆಡಳಿತ ಮಂಡಳಿ ಸದಸ್ಯರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

    ಸಂಸ್ಥೆ ಅಧ್ಯಕ್ಷ ಡಾ.ಎಲ್. ಎಚ್. ಬಿದರಿ, ಉಪಾಧ್ಯಕ್ಷ ಶರದ ರೊಡಗಿ, ಕಾರ್ಯದರ್ಶಿ ಎಸ್.ಜಿ. ಮುರನಾಳ ಖಜಾಂಚಿ ಆನಂದ ಜಿಗಜಿನ್ನಿ, ಆಡಳಿತ ಮಂಡಳಿ ಸದಸ್ಯ ಡಾ.ಶ್ರೀನಿವಾಸ ಹಯಾತಿ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts