ಬಾಗಲಕೋಟೆ: ಸ್ನೇಹಿತರಿಗೆ ನೀಡಿದ ಸಾಲದ ಹಣ ಮರುಪಾವತಿಯಾಗಿಲ್ಲವೆಂದು ಮನನೊಂದ ಪಶುವೈದ್ಯರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ನಡೆದಿದೆ. ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಗ್ರಾಮದ ನಿವಾಸಿ ನಂದೆಪ್ಪ ಬಾಗೇವಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಪಶುವೈದ್ಯ.
ಇದನ್ನೂ ಓದಿ: ಯಾರೂ ಶಾಶ್ವತರಲ್ಲ ಎನ್ನುತ್ತಾ ಬೇಸರ ಹೊರಹಾಕಿದ ವಿ. ಸೋಮಣ್ಣ
ತನ್ನ ಸಹೋದ್ಯೋಗಿ ವೈದ್ಯರೊಬ್ಬರಿಗೆ ನಂದೆಪ್ಪ 5 ಲಕ್ಷ ರೂಪಾಯಿ ಸಾಲ ನೀಡಿದ್ದರು. ಜತೆಗೆ ಸ್ನೇಹಿತರೊಬ್ಬರಿಗೆ ಹಣ ಹೊಂದಿಸಿ 7 ಲಕ್ಷ ರೂಪಾಯಿ ಸಾಲ ಕೊಟ್ಟಿದ್ದರು. ಆದರೆ ಸಾಲ ಪಡೆದುಕೊಂಡ ಇಬ್ಬರು ಎಷ್ಟೇ ಸಮಯವಾದರೂ ಹಣ ಹಿಂತಿರುಗಿಸಿಲ್ಲ.
ಸಾಲದ ಹಣ ಹಿಂತಿರುಗಿ ಕೈ ಸೇರಿಲ್ಲವೆಂದು ಮನನೊಂದ ವೈದ್ಯ ನಂದೆಪ್ಪ ಮನೆಯಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ನೋಟ್ನಲ್ಲಿ ಸಾಲ ಕೊಟ್ಟವರ ವಿವರ ಬರೆದಿಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಠಾಣೆಯ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.