ಹೈದರಾಬಾದ್: ವಿಜಯ್ ಅಭಿನಯದ ‘ವಾರಿಸು’ ಚಿತ್ರವು ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಈ ಚಿತ್ರ ವಿಜಯ್ ಪಾಲಿಗೆ ವಿಶೇಷ. ಏಕೆಂದರೆ, ಇದು ತಮಿಳಿನ ಜತೆಗೆ ತೆಲುಗಿನಲ್ಲೂ ತಯಾರಾಗಿದ್ದು, ಈ ಚಿತ್ರದ ಮೂಲಕ ಟಾಲಿವುಡ್ಗೆ ವಿಜಯ್ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ.
ಇದನ್ನೂ ಓದಿ: ಇನ್ನೆರಡು ಹೊಸ ದಾಖಲೆಗಳನ್ನು ಮಾಡಿದ ‘ಕೆಜಿಎಫ್ 2’ …
ಆದರೆ, ಈ ಚಿತ್ರವನ್ನು ವಿಜಯ್ ಒಪ್ಪುವುದಕ್ಕೆ ಮುನ್ನ ತೆಲುಗಿನ ಐವರು ಟಾಪ್ ಸ್ಟಾರ್ಗಳು ನಿರಾಕರಿಸಿರುವ ವಿಷಯ ಗೊತ್ತಾ? ಅಂಥದ್ದೊಂದು ವಿಷಯ ಇದೀಗ ಬಹಿರಂಗವಾಗಿದೆ.
ಮೊದಲು ಈ ಕಥೆಯನ್ನು ಟಾಲಿವುಡ್ ನಟ ಮಹೇಶ್ ಬಾಬು ಅವರನ್ನು ಗಮನದಲ್ಲಿಟ್ಟುಕೊಂಡು ಮಾಡಲಾಯಿತಂತೆ. ಆದರೆ, ಕೈಯಲ್ಲಿ ಬೇರೆ ಚಿತ್ರಗಳಿದ್ದ ಕಾರಣ, ಅವರು ನಟಿಸುವುದಕ್ಕೆ ಸಾಧ್ಯವಾಗಿಲ್ಲ. ಆ ನಂತರ ಇದೇ ಕಥೆ ಅಲ್ಲು ಅರ್ಜುನ್, ರಾಮ್ಚರಣ್ ತೇಜ ಮತ್ತು ಪ್ರಭಾಸ್ ಹತ್ತಿರವೂ ಹೋಗಿ ಬಂತಂತೆ. ಆದರೆ, ಯಾರೂ ಈ ಚಿತ್ರವನ್ನು ಕಾರಣಾಂತರಗಳಿಂದ ಒಪ್ಪಿಲ್ಲ. ಕೊನೆಗೆ, ಈ ಕಥೆಯನ್ನು ತಮಿಳು ನಟ ವಿಜಯ್ ಒಪ್ಪಿ ಚಿತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಐವರು ನಟರು ರಿಜೆಕ್ಟ್ ಮಾಡಿದ ಕಥೆಯಲ್ಲಿ ವಿಜಯ್ ಅದೇನು ಸ್ಪೆಷಾಲಿಟಿ ಕಂಡರು? ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
ಇದನ್ನೂ ಓದಿ: ಪ್ರಭಾಸ್ ಹೊಸ ಚಿತ್ರದಲ್ಲಿ ಸಂಜಯ್ ದತ್ … ಇನ್ನೊಂದು ನೆಗೆಟಿವ್ ಪಾತ್ರದಲ್ಲಿ ‘ಅಧೀರ’?
‘ವಾರಿಸು’ ಚಿತ್ರವನ್ನು ತೆಲುಗಿನ ಜನಪ್ರಿಯ ನಿರ್ಮಾಪಕ ದಿಲ್ ರಾಜು ನಿರ್ಮಿಸಿದ್ದು, ವಂಶಿ ಪಡಿಪಲ್ಲಿ ನಿರ್ದೇಶನ ಮಾಡಿದ್ದಾರೆ. ವಿಜಯ್ಗೆ ನಾಯಕಿಯಾಗಿ ಕನ್ನಡದ ರಶ್ಮಿಕಾ ಮಂದಣ್ಣ ನಟಿಸಿದ್ದು, ಪ್ರಭು, ಶರತ್ ಕುಮಾರ್, ಪ್ರಕಾಶ್ ರಾಜ್ ಮುಂತಾದವರು ನಟಿಸಿದ್ದಾರೆ.
ಕರೊನಾ ನಂತರ ಅತಿ ಹೆಚ್ಚು ಗಳಿಸಿದ ಸಿನಿಮಾ ಅವತಾರ್-2; ಮೂರು ದಿನದಲ್ಲಿ 3,500 ಕೋಟಿ ರೂ. ಗಳಿಕೆ..!