ಲಖನೌ: ಆಸ್ತಿ ವಿಚಾರಕ್ಕೆ ವ್ಯಕ್ತಿಯೊಬ್ಬ ತನ್ನದೇ ಕುಟುಂಬದ ಆರು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶ ರಾಜಧಾನಿ ಲಖನೌದ ಹೊರವಲಯದಲ್ಲಿ ಗುರುವಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಅಜಯ್ ಸಿಂಗ್(26) ಎಂದು ಗುರುತಿಸಲಾಗಿದೆ. ಕೊಲೆಗೈದ ಬಳಿಕ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ತಪ್ಪನ್ನು ಒಪ್ಪಿಕೊಂಡು ಶರಣಾಗಿದ್ದಾನೆ.
ಇದನ್ನೂ ಓದಿ: ಕರೊನಾ ವೈರಸ್ ಅಂತ್ಯ ಯಾವಾಗ? ಕೊಳ್ಳೇಗಾಲದ ಪ್ರಖ್ಯಾತ ಜ್ಯೋತಿಷಿ ನುಡಿದ ಭವಿಷ್ಯವೇನು?
ಆಸ್ತಿ ವಿವಾದ ಸಂಬಂಧ ಕುಟುಂಬದೊಂದಿಗೆ ಆರೋಪಿ ಸಿಂಗ್ ಮಾತಿಗೆ ಇಳಿದಾಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಚೂಪಾದ ಆಯುಧಗಳಿಂದ ಕುಟುಂಬದ ಸದ್ಯಸರ ಮೇಲೆ ಸಿಂಗ್ ದಾಳಿ ಮಾಡಿದ್ದಾನೆ. ಪರಿಣಾಮ ಆರೋಪಿಯ ತಾಯಿ, ತಂದೆ, ಹಿರಿಯ ಸಹೋದರ, ಅತ್ತಿಗೆ ಮತ್ತು ಅವರ ಇಬ್ಬರು(ಗಂಡು, ಹೆಣ್ಣು) ಮಕ್ಕಳು ಹತರಾಗಿದ್ದಾರೆ.
ಸಂತ್ರಸ್ತರನ್ನು ಅಮರ್(60), ರಮಾಸಖಿ(55), ಅರುಣ್(40), ರಾಮ್ದುಲರಿ(35), ಸೌರಭ್(7) ಮತ್ತು ಸಾರಿಕ(2) ಎಂದು ಗುರುತಿಸಲಾಗಿದೆ.
ಕುಟುಂಬದ ಆರು ಮಂದಿಯನ್ನು ಕೊಂದು ತಾನೇ ಖುದ್ದಾಗಿ ಬಂದು ಠಾಣೆಗೆ ಶರಣಾಗಿದ್ದಾನೆ ಎಂದು ಪೊಲೀಸ್ ಆಯುಕ್ತ ಸುಜೀತ್ ಪಾಂಡೆ ಸುದ್ದಿಗಾರರು ಕೇಳಿದ ಪ್ರಶ್ನಗೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಅಣ್ಣನನ್ನು ಬಾವಿಗೆ ಎಸೆದು ತಂಗಿಯನ್ನು ಹೊತ್ತೊಯ್ದ ಕಾಮುಕರು: ಮೂವರು ಅಪ್ರಾಪ್ತರು ಸೇರಿ 7 ಮಂದಿಯಿಂದ ದುಷ್ಕೃತ್ಯ
ಆರೋಪಿ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್)