ನವದೆಹಲಿ: 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಆರಂಭದಲ್ಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕರೊನಾವನ್ನು 2ನೇ ಮಹಾಯುದ್ದಕ್ಕೆ ಹೋಲಿಸಿದರು. ಕರೊನಾದಿಂದಾಗಿ ಆರ್ಥಿಕಮಟ್ಟ ಕುಸಿದಿದ್ದು, ಭಾರತದ ಆರ್ಥಿಕತೆಗೆ ಈ ಬಜೆಟ್ ಮುನ್ನುಡಿ ಆಗಲಿದೆ ಎಂದರು.
ಕೋವಿಡ್ ನಿರ್ವಹಣೆಗಾಗಿ ಶೇ.13 ಹಣ ವಿನಿಯೋಗಿಸಲಾಗಿದೆ. ಕರೊನಾ ವಿರುದ್ಧ ಹೋರಾಟ ಮುಂದುವರಿಯಲಿದೆ. ಶೀಘ್ರದಲ್ಲೇ ಇನ್ನೆರಡು ವ್ಯಾಕ್ಸಿನ್ ಬರಲಿದೆ ಎಂದ ಸಚಿವೆ, ವ್ಯಾಕ್ಸಿನ್ ಕಂಡುಹಿಡಿದ ವೈದ್ಯರಿಗೆ ಧನ್ಯವಾದ ಅರ್ಪಿಸಿದರು. ಕರೊನಾಗೆ ಇಡೀ ಜಗತ್ತೇ ತಲ್ಲಣಗೊಂಡಿದೆ. ಕರೊನಾ ಬಿಕ್ಕಟ್ಟನ್ನು ವಿಶ್ವದಲ್ಲೇ ಭಾರತ ಸಮರ್ಥವಾಗಿ ನಿಭಾಯಿಸಿದೆ ಎಂದ ಸಚಿವೆ, ಭಾರತದ ಮೇಲೆ ವಿಶ್ವದ ಭರವಸೆ ಹೆಚ್ಚಿದೆ ಎಂದರು.
ಕರೊನಾದಿಂದಾಗಿ ಬಹುತೇಕರು ಮನೆಯಲ್ಲೇ ಇದ್ದರು. ಲಾಕ್ಡೌನ್ ವೇಳೆ ಹಲವು ಪ್ಯಾಕೇಜ್ ಘೋಷಣೆ ಮಾಡಲಾಯಿತು. ಏಪ್ರಿಲ್ನಲ್ಲಿ ಮತ್ತೆರಡು ಕರೊನಾ ಲಸಿಕೆ ಮಾರುಕಟ್ಟೆಗೆ ಬರಲಿವೆ. ಎಲ್ಲರ ಸಹಕಾರದಿಂದಾಗಿ ಕರೊನಾ ವಿರುದ್ಧ ಗೆಲುವು ಸಾಧಿಸಿದ್ದೇವೆ. ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ ಎಂದರು. ಇದನ್ನೂ ಓದಿರಿ ಸಾಂಪ್ರದಾಯಿಕ “ಬಹಿ ಖಾತಾ” ಪದ್ಧತಿಗೆ ಗುಡ್ ಬೈ: ಬಜೆಟ್ ಮಂಡನೆಗೆ ಡಿಜಿಟಲ್ ಸ್ಪರ್ಶ!
ದೇಶದಲ್ಲಿ ಏಕೀಕೃತ ಆರೋಗ್ಯ ವ್ಯವಸ್ಥೆ ಜಾರಿಯಾಗಲಿದ್ದು, ಎಲ್ಲ ಜಿಲ್ಲೆಗಳಲ್ಲೂ ಆರೋಗ್ಯ ಟೆಸ್ಟ್ ಲ್ಯಾಬ್ ಸ್ಥಾಪನೆಗೆ ಒತ್ತು ನೀಡಲಾಗುವುದು. 20 ಮೆಟ್ರೋ ಪಾಲಿಟಿನ್ ಸಿಟಿಗಳಲ್ಲಿ ಅತ್ಯುನ್ನತ ಆರೋಗ್ಯ ಸೇವೆ, ಸಾರ್ವಜನಿಕರ ಆರೋಗ್ಯ ಕಾಪಾಡುವುದು ನಮ್ಮ ಆದ್ಯತೆ ಎಂದರು.
ಒಟ್ಟಾರೆ ಬಜೆಟ್ ಆರಂಭದಲ್ಲೇ ಆರೋಗ್ಯದ ಬಗ್ಗೆ ಪ್ರಸ್ತಾಪಿಸಿದ್ದು, ಆರೋಗ್ಯ ಕ್ಷೇತ್ರಕ್ಕೆ ಈ ಭಾರಿ ಹೆಚ್ಚು ಮನ್ನಣೆ ಸಿಕ್ಕಂತಾಗಿದೆ. ಕರೊನಾ ಸೋಂಕು ತೀವ್ರವಾಗಿ ಕಾಡಿದ ಬಳಿಕ ಆರೋಗ್ಯವೇ ಭಾಗ್ಯ ಎಂಬ ಮಂತ್ರ ಜಪಿಸುತ್ತಿರುವುದು ಆಶಾದಾಯಕ ಬೆಳವಣಿಗೆ.
ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅತ್ಯಾಚಾರ!
ಸಾಂಪ್ರದಾಯಿಕ “ಬಹಿ ಖಾತಾ” ಪದ್ಧತಿಗೆ ಗುಡ್ ಬೈ: ಬಜೆಟ್ ಮಂಡನೆಗೆ ಡಿಜಿಟಲ್ ಸ್ಪರ್ಶ!