More

    ಉಕ ಭಾಷಾ ಸೊಗಡನ್ನು ಪಸರಿಸಲಿದೆ ‘ಕ್ಷೇತ್ರಪತಿ’

    ಹೊಸಪೇಟೆ: ಕೃಷಿ ಕ್ಷೇತ್ರದಲ್ಲಿನ ಸಮಸ್ಯೆಗಳು, ರೈತ ಪರ ಹೋರಾಟದ ಕುರಿತು ಬೆಳಕು ಚೆಲ್ಲುವ, ತಂದೆ- ಮಗನ ಪ್ರೀತಿ ಬಾಂಧವ್ಯವನ್ನು ಸಾರುವ ‘ಕ್ಷೇತ್ರಪತಿ’ ಚಿತ್ರ ಆ. 18ರಂದು ರಾಜ್ಯಾದ್ಯಂತ 120 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರದ ನಾಯಕ ನಟ ನವೀನ ಶಂಕರ್ ಹೇಳಿದರು.

    ಸನ್ನಿವೇಶಗಳ ಶೂಟ್

    ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿತ್ರ ಉತ್ತರ ಕರ್ನಾಟಕದ ಭಾಷಾ ಸೊಗಡನ್ನು ಪಸರಿಸಲಿದೆ. ಗದಗ ಮೂಲದ ಶ್ರೀಕಾಂತ್ ಕಟಗಿ ಅವರ ನಿರ್ದೇಶನ, ನಿರ್ಮಾಪಕ ರಾಹುಲ್ ಸಾರಥ್ಯದಲ್ಲಿ ನಿರ್ಮಾಣಗೊಂಡಿದೆ. ರವಿ ಬಸ್ರೂರ್ ಸಂಗೀತ ನಿರ್ದೇಶನ ನೀಡಿದ್ದು, ಚಿತ್ರದ ನಾಯಕಿಯಾಗಿ ಅರ್ಚನ ಜೋಯಿಸ್ ನಟಿಸಿದ್ದಾರೆ. ಹಿರಿಯ ಕಲಾವಿದ ಅಚ್ಯುತ್ ಕುಮಾರ್, ಮರಿಯಮ್ಮನಹಳ್ಳಿಯ ಸರ್ದಾರ, ರಾಹುಲ್ ಐನಾಪುರ, ಹರ್ಷ ಅರ್ಜುನ್, ಕೆ.ಮಲ್ಲನಗೌಡ ಮರಿಯಮ್ಮನಹಳ್ಳಿ ಅವರು ಅಭಿನಯಿಸಿದ್ದಾರೆ.
    ಚಿತ್ರದಲ್ಲಿ ನಟ, ಸಹ ನಟರು ಹಾಗೂ ತಂತ್ರಜ್ಞರು ಸೇರಿ ಬಹುತೇಕ ಕಲಾವಿದರು ಉತ್ತರ ಕರ್ನಾಟಕದವರಿದ್ದಾರೆ.

    ಸ್ಥಳೀಯ ಭಾಷೆ, ರೈತರ ಸಮಸ್ಯೆ ಮತ್ತು ಪರಿಹಾರ ಕ್ರಮಗಳು, ಮಾನವೀಯ ಸಂಬಂಧಗಳನ್ನು ಪ್ರಧಾನವಾಗಿಸಿಕೊಂಡು ಚಿತ್ರ ನಿರ್ಮಿಸಲಾಗಿದೆ. ಗದಗ, ಲಕ್ಕುಂಡಿಯಲ್ಲಿ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ವಿಜಯಪುರ, ಇಲಕಲ್ ಹಾಗೂ ಬೆಂಗಳೂರಿನಲ್ಲೂ ಸಣ್ಣ ಪುಟ್ಟ ಸನ್ನಿವೇಶಗಳನ್ನು ಶೂಟ್ ಮಾಡಲಾಗಿದೆ ಎಂದರು.

    ಇದನ್ನೂ ಓದಿ:ನಮ್ಮ ಫ್ಲಿಕ್ಸ್​ನಲ್ಲಿ ಅರ್ಚನಾ ಜೋಯಿಸ್​ ಅಭಿನಯದ ‘ಮ್ಯೂಟ್’ ಬಿಡುಗಡೆ
    ನಟಿ ಅರ್ಚನಾ ಜೋಯಿಸ್ ಮಾತನಾಡಿ, ‘ಹೊಂದಿಸಿ ಬರೆಯಿಸಿ’ ಚಿತ್ರದ ಬಳಿಕ ಕ್ಷೇತ್ರಪತಿಯಲ್ಲಿ ನಾನು ಮತ್ತು ನವೀನ್ ಶಂಕರ್ ಒಂದಾಗಿ ನಟಿಸಿದ್ದೇವೆ. ಕೆಜಿಎಫ್- 2 ಸೇರಿ ವಿವಿಧ ಚಿತ್ರಗಳಲ್ಲಿ ಪೋಷಕ ನಟಿಯಾಗಿ ಅಭಿನಿಸಿದ್ದೇನೆ. ಇದೇ ಮೊದಲ ಬಾರಿಗೆ ನಾಯಕಿಯಾಗಿ ಅಭಿನಯಿಸಿರುವ ‘ಕ್ಷೇತ್ರಪತಿ’ ಈಗ ಪ್ರೇಕ್ಷಕರ ಮುಂದೆ ಬರಲಿದೆ ಎಂದರು.
    ಸುದ್ದಿಗೋಷ್ಠಿಯಲ್ಲಿ ಚಿತ್ರದ ನಾಯಕಿ ಅರ್ಚನ ಜೋಯಿಸ್, ರಾಹುಲ್ ಐನಾಪುರ, ಹರ್ಷ ಅರ್ಜುನ್,
    ಮರಿಯಮ್ಮನಹಳ್ಳಿಯ ಸರ್ದಾರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts