ಉಡುಪಿ: ಮಾಸ್ಕ್ ಧರಿಸದ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ಗೆ ಬಸ್ನ್ನು ನಿಲ್ಲಿಸಿ ದಂಡ ವಿಧಿಸುವ ಮೂಲಕ ಜಿಲ್ಲಾಧಿಕಾರಿ ಜಿ.ಜಗದೀಶ್ ಗಮನ ಸೆಳೆದರು. ಶನಿವಾರ ಕೋರ್ಟ್ ಸಮೀಪ ನಡೆದ ಕೋವಿಡ್ ಜನಾಂದೋಲನ ಮಾಹಿತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ರಸ್ತೆ ದಾಟುವಾಗ ಮುಂದೆ ಹಾದು ಕೆಎಸ್ಆರ್ಟಿಸಿ ಸರ್ಕಾರಿ ಬಸ್ನಲ್ಲಿ ಬಸ್ ಮುಂದುಗಡೆ ಕುಳಿತಿದ್ದ ಕಂಡಕ್ಟರ್ ಮಾಸ್ಕ್ ಧರಿಸದೆ ಕುಳಿತಿರುವನ್ನು ಗಮನಿಸಿದರು. ಕೂಡಲೇ ಬಸ್ ನಿಲ್ಲಿಸುವಂತೆ ಸೂಚಿಸಿದರು. ಕಂಡಕ್ಟರ್ಗೆ ತಕ್ಷಣ ಸ್ಥಳದಲ್ಲೇ ದಂಡ ವಿಧಿಸುವಂತೆ ಸ್ಥಳದಲ್ಲಿದ್ದ ಪೊಲೀಸ್ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು. ಬಳಿಕ ಕಂಡಕ್ಟರ್ ಸೇರಿದಂತೆ, ಉಳಿದ ಪ್ರಯಾಣಿಕರು ಮಾಸ್ಕ್ನ್ನು ಧರಿಸಿದರು. ವಾಹನದಲ್ಲಿದ್ದ ಇತರೆ ಪ್ರಯಾಣಿಕರು ಮಾಸ್ಕ್ ಧರಿಸದಿರುವುದನ್ನು ಕಂಡ ಜಿಲ್ಲಾಧಿಕಾರಿ ಅವರಿಗೂ ದಂಡ ವಿಧಿಸುವಂತೆ ಸೂಚಿಸಿದರು. ಮಾಸ್ಕ್ ಇರುವುದು ಕಿಸೆಯಲ್ಲಿಟ್ಟುಕೊಳ್ಳಲು ಅಲ್ಲ. ನೀವೆ ಮಾಸ್ಕ್ ಧರಿಸಿಲ್ಲವಾದರೆ ಪ್ರಯಾಣಿಕರು ನಿಮ್ಮನ್ನು ಅನುಸರಿಸುತ್ತಾರೆ ಜನರು ಮತ್ತು ನಿಮ್ಮ ಆರೋಗ್ಯ ದೃಷ್ಟಿಯಿಂದ ಮುಂದೆ ಹೀಗಾಗದಂತೆ ನಡೆದುಕೊಳ್ಳಬೇಕು ಎಂದು ಕಂಡಕ್ಟರ್ಗೆ ಸಲಹೆ ನೀಡಿದರು.