More

    ಉಡುಪಿಯಲ್ಲಿ ಬೀಸಿದ ಸುಂಟರಗಾಳಿಗೆ ಹಾರಿದ ಮನೆ ಚಾವಣಿ: ಇಬ್ಬರಿಗೆ ಗಾಯ, ಕಂಪೌಂಡ್ ಗೋಡೆ ಕುಸಿತ

    ಉಡುಪಿ: ಕಳತ್ತೂರು ಹಾಗೂ ಪಾದೂರು ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಬೀಸಿದ ಸುಂಟರಗಾಳಿಗೆ ಎರಡು ಮನೆ ಹಾಗೂ ಕಂಪೌಂಡ್ ಗೋಡೆ ಕುಸಿತವಾಗಿದ್ದು ಇಬ್ಬರು ಗಾಯಗೊಂಡಿದ್ದಾರೆ.

    ಬಿರುಗಾಳಿಗೆ ಚಾವಣಿ ಕುಸಿತವಾಗಿದ್ದು ಈ ಸಂದರ್ಭ ಮನೆಯೊಳಗಿದ್ದ ಶಾಮಲಾ ಮಡಿವಾಳ ಹಾಗೂ ಮೂರ್ತಿ ಎಂಬುವರ ತಲೆಗೆ ಹೆಂಚು ತುಂಡು ಬಿದ್ದು ಗಾಯವಾಗಿದೆ. ಗಾಯಗೊಂಡವರಿಗೆ ಕಾಪು ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ.

    ರಸ್ತೆ ಬದಿ ಇದ್ದ ಗೂಡಂಗಡಿಯ ಛಾವಣಿಯ ಹಾರಿಹೋಗಿದೆ. ಸ್ಥಳಕ್ಕೆ ಪಾದೂರು ಗ್ರಾಮಲೆಕ್ಕಾಧಿಕಾರಿ ಕ್ಲಾರೆನ್ಸ್ ಹಾಗೂ ಮಜೂರು ಪಂಚಾಯಿತಿ ಮಾಜಿ ಅಧ್ಯಕ್ಷ ಸಂದೀಪ್ ರಾವ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ರಂಗಶೆಟ್ಟಿ ಮೊದಲಾದವರು ಭೇಟಿ ನೀಡಿದ್ದಾರೆ.

    ಬಾಲಕಿಯ ರೇಪ್​ ಮಾಡಿ, ಕಣ್ಣು ಕಿತ್ತು, ನಾಲಿಗೆ ಕತ್ತರಿಸಿ, ಉಸಿರುಗಟ್ಟಿಸಿ ಕೊಲೆಗೈದ ದುಷ್ಕರ್ಮಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts