More

    ಮನೆಯಲ್ಲಿ ಕಳ್ಳತನ ಮಾಡಿದ್ದವರ ಸೆರೆ

    ಶಿವಮೊಗ್ಗ: ಮೇಲಿನ ತುಂಗಾನಗರದಲ್ಲಿ ಮನೆಗೆ ನುಗ್ಗಿ ಬೀರುವಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು 64 ಗ್ರಾಂ ಬಂಗಾರದ ಆಭರಣ, 200 ಗ್ರಾಂ ಬೆಳ್ಳಿ ಆಭರಣ ಮತ್ತು 5 ಸಾವಿರ ರೂ. ನಗದು ವಶಕ್ಕೆ ಪಡೆದಿದ್ದಾರೆ.
    ಕೆಳಗಿನ ತುಂಗಾನಗರದ ತಬ್ರಕ್ ಉಲ್ಲಾ (20) ಮತ್ತು ಅಣ್ಣಾನಗರದ ಸೈಯದ್ ಸುಬಾನ್ (20) ಬಂಧಿತರು. ಸೆ.25ರಂದು ಮೇಲಿನ ತುಂಗಾನಗರದ ಮನೆಯೊಂದರ ಹಿಂಬಾಗಿಲು ಮುರಿದು ಬೀರುವಲ್ಲಿದ್ದ ಆಭರಣಗಳನ್ನು ಕಳವು ಮಾಡಿದ್ದರು.
    ಈ ಬಗ್ಗೆ ಮನೆ ಮಾಲೀಕರು ತುಂಗಾನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬುಧವಾರ ಇಬ್ಬರನ್ನೂ ಬಂಧಿಸಿ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ನಗದು ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts