More

    ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿರುವ ಶಾಸಕ, ಬಿಜೆಪಿ ಅಭ್ಯರ್ಥಿ ಜ್ಯೋತಿಗಣೇಶ್

    ತುಮಕೂರು: ನಗರದಲ್ಲಿ ಮೂಲಸೌಕರ್ಯಗಳಿಂದ ವಂಚಿತವಾಗಿರುವ ಬಡಾವಣೆಗಳನ್ನು ಗುರುತಿಸಿ ಶಕ್ತಿ ಮೀರಿ ಬಡಾವಣೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮತ್ತೊಮ್ಮೆ ನನ್ನನ್ನು ಆಶೀರ್ವದಿಸಿ ಎಂದು ಶಾಸಕ, ಬಿಜೆಪಿ ಅಭ್ಯರ್ಥಿ ಜಿ.ಬಿ.ಜ್ಯೋತಿಗಣೇಶ್ ಮನವಿ ಮಾಡಿದರು.

    ನಗರದ ವಿವಿಧ ವಾರ್ಡ್‌ಗಳಲ್ಲಿ ಮಂಗಳವಾರ ಮತಬೇಟೆ ಮುಂದುವರಿಸಿದ ಜ್ಯೋತಿಗಣೇಶ್, ಜಯನಗರ, ಮಾರುತಿನಗರ, ನೃಪತುಂಗ ಬಡಾವಣೆ, ಬಡ್ಡಿಹಳ್ಳಿ, ಗಿರಿನಗರ, ಶಿವರಾಮ ಕಾರಂತನಗರ, ಸಿದ್ದರಾಮೇಶ್ವರ ಬಡಾವಣೆ, ಗೋಕುಲ ಬಡಾವಣೆಗಳಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.

    ಅತಿವೃಷ್ಟಿ, ಕರೊನಾ ಸಂಕಷ್ಟದ ಸಂದರ್ಭದಲ್ಲಿ ಎದುರಾದ ಆರ್ಥಿಕ ಸಮಸ್ಯೆ ನಡುವೆಯೂ ಸರ್ಕಾರದ ವಿವಿಧ ಯೋಜನೆಗಳಡಿ ಅನುದಾನ ತಂದು ನಗರದ ವಿವಿಧ ಬಡಾವಣೆಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮತ್ತೊಮ್ಮೆ ನನ್ನನ್ನು ಆಶೀರ್ವದಿಸಿದರೆ ಅಪೂರ್ಣಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಶ್ರಮಿಸುತ್ತೇನೆ ಎಂದರು.

    ಕೆಲಸದ ತೃಪ್ತಿ ಇದೆ: ನಗರದ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದಷ್ಟು ಅಭಿವೃದ್ಧಿ ಕೆಲಸಗಳು ನನ್ನ ಅವಧಿಯಲ್ಲಾಗಿದ್ದು, ಅಭಿವೃದ್ಧಿ ವಿಚಾರವಾಗಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿರುವುದು ನನಗೆ ಸಂತಸ ತಂದಿದೆ. ನನ್ನ ಕೆಲಸದ ಬಗ್ಗೆ ನನಗೆ ತೃಪ್ತಿಯಿದೆ ಎಂದು ಜ್ಯೋತಿಗಣೇಶ್ ಹೇಳಿದರು.


    ರಾಜಧಾನಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ನಗರದ ಅಭಿವೃದ್ಧಿ ಚಿತ್ರಣದ ನೀಲಿನಕ್ಷೆಯು ನನ್ನ ಮನಸಿನಲ್ಲಿದೆ. ಮತ್ತೊಮ್ಮೆ ನನಗೆ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಿ. ನಗರದ ಸುಸ್ಥಿರ ಅಭಿವೃದ್ಧಿಗೆ ಸಂಕಲ್ಪ ಮಾಡಿ, ಶ್ರಮಿಸುವೆ ಎಂದರು.
    ಪಾಲಿಕೆ ಸದಸ್ಯೆ ದೀಪಶ್ರೀಮಹೇಶ್‌ಬಾಬು, ಟೂಡಾ ಮಾಜಿ ಅಧ್ಯಕ್ಷ ಬಿ.ಎಸ್.ನಾಗೇಶ್, ಪಾತ್ರೆಚಂದ್ರಣ್ಣ, ಟಿ.ಕೆ.ಗೋಪಾಲ್, ಮೋಹನ್, ನರಸಿಂಹಸ್ವಾಮಿ, ಸದಾರಾಮ್, ಯೋಗೀಶ್, ರೇಣುಕುಮಾರ್, ಶುಭಾರಮೇಶ್, ಗೀತಾ, ಟಿ.ಡಿ.ವಿನಯ್ ಸೇರಿದಂತೆ ನಗರದ ಹಾಗೂ ಬಡಾವಣೆಯ ಬಿಜೆಪಿ ಮುಖಂಡರು ಈ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

    ಚಿಕ್ಕಪೇಟೆಯಲ್ಲಿ ರೋಡ್ ಶೋ: ಮಂಡಿಪೇಟೆ, ಚಿಕ್ಕಪೇಟೆ, ಅಗ್ರಹಾರ, ಗಾರ್ಡನ್ ರಸ್ತೆ, ದಿಬ್ಬೂರು ರಸ್ತೆವರೆಗೂ ಜ್ಯೋತಿಗಣೇಶ್ ಭರ್ಜರಿ ರೋಡ್ ಶೋ ಮೂಲಕ ಮತಯಾಚಿಸಿದರು. ಚಿಕ್ಕಪೇಟೆಯಲ್ಲಿ ಕಾರ್ಪೋರೇಟರ್ ದೀಪಶ್ರೀ, ಪಾತ್ರೆಚಂದ್ರಣ್ಣ, ಬಿ.ಎಸ್.ನಾಗೇಶ್ ಸೇರಿ ಹಲವರು ಸಾಥ್ ನೀಡಿದರು. ಸಾವಿರಾರು ಬಿಜೆಪಿ ಕಾರ್ಯಕರ್ತರು ರೋಡ್ ಶೋನಲ್ಲಿ ಘೋಷಣೆಗಳನ್ನು ಮೊಳಗಿಸಿ ಪ್ರಚಾರ ರಂಗೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts