More

    ನಿತ್ರಾಣಗೊಂಡ ಆನೆಗೆ ಚಿಕಿತ್ಸೆ

    ಎನ್.ಆರ್.ಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಮಾರಿದಿಬ್ಬ ಸಮೀಪದ ಶುಂಠಿಕೆರೆ ಎಂಬಲ್ಲಿ ನಿತ್ರಾಣಗೊಂಡ ಕಾಡಾನೆ ಮರಿಯೊಂದಿಗೆ ಇದ್ದು, ಪಶು ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಆಹಾರ ನೀಡುತ್ತಿದ್ದಾರೆ.

    ಒಂದು ವಾರದಿಂದ ಕಾಡಾನೆ ಗಂಡು ಮರಿಯೊಂದಿಗೆ ಕಂಡು ಬಂದಿದೆ. ಮಾರಿದಿಬ್ಬ ಸಮೀಪದ ಭದ್ರಾ ಹಿನ್ನೀರಿಗೆ ಬಂದು ನೀರು ಕುಡಿದು ಮತ್ತೆ ಮರಿಯೊಂದಿಗೆ ಕಾಡು ಸೇರುತ್ತಿದೆ. ಬಿಸಿಲಿನಿಂದ ಕಾಡಿನಲ್ಲಿ ಸಾಕಷ್ಟು ಆಹಾರ ಸಿಗದೆ ಸೊರಗಿದೆ. ಇದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಲಕ್ಕವಳ್ಳಿ ಭದ್ರಾ ವನ್ಯಜೀವಿ ವಿಭಾಗಕ್ಕೆ ಮಾಹಿತಿ ನೀಡಿದ್ದಾರೆ. ವನ್ಯಜೀವಿ ವಿಭಾಗದ ಪಶು ವೈದ್ಯ ವಿಶಾಕ್ ಆಗಾಗ ಬಂದು ಕಾಡಾನೆಗೆ ಬೇಕಾದ ಔಷಧವನ್ನು ಆಹಾರದೊಂದಿಗೆ ಮಿಶ್ರ ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ. ಜತೆಗೆ ಸ್ಥಳೀಯ ವನಪಾಲಕ ಸಂದೀಪ್ ಕಾಡಾನೆಗೆ ಹುಲ್ಲು, ಬಾಳೆಹಣ್ಣು, ಕಲ್ಲಂಗಡಿ ಹಣ್ಣು ಸೇರಿದಂತೆ ವಿವಿಧ ಆಹಾರ ನೀಡುತ್ತಿದ್ದಾರೆ. ಕಾಡಾನೆ ಮರಿ ಹಾಕಿದ ನಂತರ ಹಿಂಡಿನಿಂದ ಬೇರೆಯಾಗಿರಬಹುದು ಎನ್ನಲಾಗಿದೆ.
    ಮಾರಿದಿಬ್ಬ ಸಮೀಪದಲ್ಲಿ ಸುತ್ತಾಡುತ್ತಿರುವ ಮರಿ ಹಾಕಿದ ಆನೆ ನಿಶ್ಯಕ್ತವಾಗಿದ್ದು ಚಿಕಿತ್ಸೆ, ಆಹಾರ ನೀಡಿದ್ದೇವೆ. ಲಕ್ಕವಳ್ಳಿ ಭದ್ರಾ ವನ್ಯಜೀವಿ ವಿಭಾಗದ ಪಶು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅರಣ್ಯ ಇಲಾಖೆಯಿಂದ ಆಹಾರ ನೀಡುತ್ತಿದ್ದೇವೆ. ಕಾಡಾನೆ ಮರಿ ಹಾಕಿ 2-3 ತಿಂಗಳು ಆಗಿರಬಹುದು ಎಂದು ಎನ್.ಆರ್.ಪುರ ವಲಯ ಅರಣ್ಯಾಧಿಕಾರಿ ಎನ್.ಪ್ರವಿಣ್‌ಕುಮಾರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts