More

    ಇಂದು ಚಿರು ಸರ್ಜಾ ಪುಣ್ಯಸ್ಮರಣೆ; ಅಗಲಿ ಇಂದಿಗೆ ಭರ್ತಿ 1 ವರ್ಷ

    ಬೆಂಗಳೂರು: ಸರಿಯಾಗಿ ಒಂದು ವರ್ಷದ ಹಿಂದೆ ನಟ ಚಿರಂಜೀವಿ ಸರ್ಜಾ ಇದೇ ದಿನ ಹೃದಯಾಘಾತದಿಂದ ನಿಧನರಾದರು. ಅವರ ಅಗಲಿಕೆಗೆ ಒಂದು ವರ್ಷವಾಗಿದ್ದು, ಇಂದು ಪುಣ್ಯಸ್ಮರಣೆ ನಡೆಯಲಿದೆ. ಕಳೆದ ವರ್ಷ ಲಾಕ್​ಡೌನ್ ಸಮಯದಲ್ಲಿ ಆರೋಗ್ಯಕರವಾಗಿಯೇ ಇದ್ದ ಚಿರಂಜೀವಿ ಸರ್ಜಾ, ಜೂನ್ 07ರಂದು ಹಠಾತ್ತನೇ ಕೊನೆಯುಸಿರೆಳೆದರು. ಅವರ ನಿಧನ, ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿತ್ತು. ಚಿರು ನಿಧನರಾದಾಗ ಪತ್ನಿ ಮೇಘನಾ ರಾಜ್, ಐದು ತಿಂಗಳ ಗರ್ಭಿಣಿಯಾಗಿದ್ದರು. ಅಕ್ಟೋಬರ್​ನಲ್ಲಿ ಜ್ಯೂನಿಯರ್ ಚಿರುಗೆ ಜನ್ಮ ನೀಡಿದ ಮೇಘನಾ, ಆ ಮಗುವಿನ ಪೋಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪತಿಯ ಮೊದಲನೇ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ಮೇಘನಾ ರಾಜ್, ಭಾನುವಾರ ಒಂದು ವಿಶೇಷ ಫೋಟೋವೊಂದನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಅದಕ್ಕೆ ‘ನಾವು – ನನ್ನದು’ ಎಂಬ ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ರಾಜ್ಯದಲ್ಲಿ ಶತಕ ಬಾರಿಸಿದ ಪೆಟ್ರೋಲ್​ ದರ; ಕೆಲವೆಡೆ 100 ದಾಟಿತು ಲೀಟರ್ ಬೆಲೆ, ಇನ್ನಿದೆ ನೂರೆಂಟು ಬರೆ…

    ಅಡುಗೆ ಮನೆವರೆಗೆ ಹಿಂಬಾಲಿಸಿಕೊಂಡು ಬಂದು ವೃದ್ಧೆಯ ಸರ ಎಗರಿಸಿದ ಕಳ್ಳ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts