More

    ಮೋದಿ ಧ್ಯಾನ ಮಾಡಿದ್ದ ಸ್ಥಳದಲ್ಲೀಗ ಮೂರು ಹೊಸ ಗುಹೆಗಳು!

    ಉತ್ತರಾಖಂಡ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳೆದ ವರ್ಷ ಮೇನಲ್ಲಿ ಉತ್ತರಾಖಂಡದ ರುದ್ರ ಗುಹೆಯಲ್ಲಿ ಧ್ಯಾನ ಮಾಡಿದ್ದು, ಆ ಬಳಿಕ ಆ ಸ್ಥಳ ಜನಪ್ರಿಯವಾಗಿದ್ದೆಲ್ಲ ಈಗ ಹಳೆಯ ವಿಷಯ. ಆದರೆ ಹೊಸ ವಿಚಾರ ಏನೆಂದರೆ ಆ ಸ್ಥಳದಲ್ಲೀಗ ಹೊಸದಾಗಿ ಮೂರು ಗುಹೆಗಳಾಗಿವೆ!

    ಮೋದಿ ಧ್ಯಾನ ಮಾಡಿದ ಬಳಿಕ ಆ ಗುಹೆ ಇರುವ ಕೇದಾರನಾಥದ ಸಮೀಪದ ಸ್ಥಳವು ಭಾರಿ ಜನಪ್ರಿಯತೆ ಪಡೆದಿದೆ. ಅಲ್ಲಿ ಮತ್ತಷ್ಟು ಗುಹೆಗಳನ್ನು ನಿರ್ಮಿಸಲಾಗವುದು ಎಂದು ಅಲ್ಲಿನ ಸರ್ಕಾರ ಘೋಷಿಸಿತ್ತು. ಅದರಂತೆ ಈಗ ಅಲ್ಲಿ ಮೂರು ಹೊಸ ಗುಹೆಗಳ ನಿರ್ಮಾಣ ಪೂರ್ಣಗೊಂಡಿದೆ ಎಂದು ಉತ್ತರಾಖಂಡದ ಸರ್ಕಾರ ಬುಧವಾರ ಪ್ರಕಟಿಸಿದೆ. ಆ ಗುಹೆಗಳನ್ನು ಗರ್ವಾಲ್ ಮಂಡಲ್​ ವಿಕಾಸ್​ ನಿಗಮಕ್ಕೆ ನವೆಂಬರ್ 11ರಂದು ಹಸ್ತಾಂತರಿಸಲಾಗುವುದು ಎಂದೂ ಸರ್ಕಾರ ಹೇಳಿದೆ.

    ಕಳೆದ ವರ್ಷದ ಮೇನಲ್ಲಿ ಕೇದಾರನಾಥ ಕ್ಷೇತ್ರದಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿನ ರುದ್ರ ಗುಹೆಯಲ್ಲಿ ಮೋದಿ ಒಂದಿಡೀ ದಿನ ಧ್ಯಾನನಿರತರಾಗಿದ್ದರು. ಆ ಮೂಲಕ ಸ್ವಚ್ಛ ಹಾಗೂ ಸುರಕ್ಷಿತ ಚಾರ್ ಧಾಮ್​ ಯಾತ್ರೆಯ ಸಂದೇಶ ರವಾನಿಸಿದ್ದರು. ಬಳಿಕ ಕಳೆದ ವರ್ಷದ ಆರು ತಿಂಗಳ ಅವಧಿಯಲ್ಲಿ ಹಿಂದೆಂದೂ ಬರದಷ್ಟು ಯಾತ್ರಿಕರು ಚಾರ್​ ಧಾಮ್​ಗೆ ಭೇಟಿ ನೀಡಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts