ಮಂಗಳೂರು: ಕಾಪಿಕಾಡ್ 6ನೇ ಕ್ರಾಸ್ನ 4 ಲೇನ್ನಲ್ಲಿ ಚಿಲಿಂಬಿಗುಡ್ಡೆ ಸಂಪರ್ಕ ರಸ್ತೆಯ ಎತ್ತರ ಪ್ರದೇಶದಲ್ಲಿ ಗುಡ್ಡ ಕುಸಿದು ತಿಮ್ಮಪ್ಪ ಕಾಂಪೌಂಡ್ನಲ್ಲಿರುವ ಮನೆಗಳಿಗೆ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ಥಳೀಯ ಕಾರ್ಪೊರೇಟರ್ ಎಂ.ಶಶಿಧರ ಹೆಗ್ಡೆ ತುರ್ತಾಗಿ ಸ್ಪಂದಿಸಿ ಅಪಾಯ ತಡೆಗಟ್ಟಲು ಜಲ್ಲಿ ಹುಡಿ ತುಂಬಿದ ಗೋಣಿಚೀಲಗಳನ್ನು ಜೋಡಿಸುವ ಮೂಲಕ ತಡೆ ನಿರ್ಮಿಸಿಕೊಟ್ಟು ಇನ್ನು ಕುಸಿಯದಂತೆ ಕ್ರಮ ಕೈಗೊಂಡಿದ್ದಾರೆ. ಮುಂದೆ ಗುಡ್ಡ ಕುಸಿತದಿಂದ ತೊಂದರೆಯಾಗದಂತೆ ಶಾಶ್ವತ ಕಾಮಗಾರಿ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.