ಕಾಸರಗೋಡು: ಹೊಸದುರ್ಗ ಮಡಿಕೈಯಲ್ಲಿ ಮಲಗಿದ್ದ ತಾಯಿಯ ತಲೆಗೆ ಭಾನುವಾರ ತಡರಾತ್ರಿ ರುಬ್ಬುವ ಕಲ್ಲು ಎತ್ತಿ ಹಾಕಿ ನಂತರ ಕೆರೆಮಣೆಯಿಂದ ತಲೆಗೆ ಬಡಿದು ಕೊಲೆಗೆ ಯತ್ನಿಸಿದ ಬಳಿಕ ಪುತ್ರ ನೇಣಿಗೆ ಶರಣಾಗಿದ್ದಾನೆ.
ಮಡಿಕೈ ಅಲೈಪತ್ತುಕಾರನ್ ವೀಟಿಲ್ ನಿವಾಸಿ ಸುಧಾ(37) ಗಾಯಗೊಂಡ ಮಹಿಳೆ. ಅವರ ಏಕೈಕ ಪುತ್ರ, ಕಯ್ಯೂರು ಐಟಿಐ ವಿದ್ಯಾರ್ಥಿ ಸುಜಿತ್ ನೇಣಿಗೆ ಶರಣಾದ ವಿದ್ಯಾರ್ಥಿ.
ಗಂಭೀರ ಗಾಯಗೊಂಡಿರುವ ಸುಧಾ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಧಾ ಅವರ ಪತಿ ಇತ್ತೀಚೆಗೆ ಮೃತಪಟ್ಟಿದ್ದು, ನಂತರ ಮಾನಸಿಕ ಖಿನ್ನತೆಗೊಳಗಾಗಿದ್ದ ಸುಧಾ ಪುತ್ರ ಸುಜಿತ್ನನ್ನು ಮನೆಯಿಂದ ಹೊರ ಹೋಗಲು ಬಿಡದೆ, ಸದಾ ತನ್ನ ಜತೆಗಿರುವಂತೆ ನೋಡಿಕೊಳ್ಳುತ್ತಿದ್ದರು. ಓಣಂ ಹಬ್ಬದ ಅಂಗವಾಗಿ ಮನೆ ಸನಿಹ ನಡೆದ ಕಾರ್ಯಕ್ರಮಕ್ಕೆ ತೆರಳಿದ್ದ ಸುಜಿತ್ನನ್ನು ತಾಯಿ ತರಾಟೆಗೆ ತೆಗೆದುಕೊಂಡಿದ್ದರು. ತನ್ನ ಮೇಲೆ ನಿಯಂತ್ರಣ ಹೇರುತ್ತಿರುವ ತಾಯಿಯ ಮೇಲೆ ಕೋಪಗೊಂಡು ಕೃತ್ಯವೆಸಗಿರುವುದಾಗಿ ಸುಜಿತ್ ಪೊಲೀಸರಿಗೆ ತಿಳಿಸಿದ್ದಾರೆ. ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.