More

    ಉದಯೋನ್ಮುಖ ಬರಹಗಾರರಿಂದ ಪ್ರಕಟಣೆಗಾಗಿ ಕೃತಿ ಆಹ್ವಾನ

    ಬೆಂಗಳೂರು: ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು 2024ನೇ ಸಾಲಿನಲ್ಲಿ ಉದಯೋನ್ಮುಖ ಬರಹಗಾರರ ಮೌಲ್ಯಯುತ ಕೃತಿಗಳನ್ನು ಪ್ರಕಟಣೆಗೆ ಆಹ್ವಾನಿಸಿದೆ.

    ಕಥಾ ಸಂಕಲನ (ಕನಿಷ್ಠ 10 ಕಥೆಗಳು), ಕಾದಂಬರಿ (120 ಪುಟಗಳಿಗೆ ಮೀರಬಾರದು), ವಿಜ್ಞಾನ (80 ಪುಟಗಳ ಚಿತ್ರ ಸಹಿತ), ಮಕ್ಕಳ ಸಾಹಿತ್ಯ (ಕನಿಷ್ಠ 80 ಪುಟಗಳು) ಕೃತಿಗಳನ್ನು ಪ್ರಕಟಿಸಿ ಉದಯೋನ್ಮುಖ ಲೇಖಕ, ಲೇಖಕಿಯರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.

    ಪ್ರಕಟಣೆಗೆ ಆಯ್ಕೆಯಾದ ಲೇಖಕರಿಗೆ 50 ಗೌರವ ಪ್ರತಿ ಹಾಗೂ ಬಿಡುಗಡೆ ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಹಸ್ತಪ್ರತಿಗಳನ್ನು ಬಿ.ಕೆ.ಸುರೇಶ, ಸಹ ಕಾರ್ಯದರ್ಶಿ, ಅನ್ನಪೂರ್ಣ ಪಬ್ಲಿಷಿಂಗ್ ಹೌಸ್,ನಂ.176, 12ನೇ ಮುಖ್ಯರಸ್ತೆ, ಅಗ್ರಹಾರ ದಾಸರಹಳ್ಳಿ, ಮಾಗಡಿ ಮುಖ್ಯರಸ್ತೆ, ಬೆಂಗಳೂರು – 560079 ಈ ವಿಳಾಸಕ್ಕೆ ಕೊರಿಯರ್ ಮೂಲಕ ಕಳುಹಿಸಬಹುದು. ಅಥವಾ ಇಮೇಲ್ : [email protected] ಮೂಲಕ ಫೆ.28ರೊಳಗೆ ತಲುಪುವಂತೆ ಕಳುಹಿಸಲು ಕೋರಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts